ಪ್ರಮುಖ ಸುದ್ದಿ

ಇನ್ಮುಂದೆ ಸರ್ಕಾರದ ಅಧೀನಕ್ಕೆ ಮಧ್ಯದ ಅಂಗಡಿಗಳು.?

ಹಂತ ಹಂತವಾಗಿ ಮಧ್ಯ ಮಾರಾಟ ಸ್ಥಗಿತಕ್ಕೆ ಕ್ರಮ-ನಾರಾಯಣಸ್ವಾಮಿ

ವಿವಿ ಡೆಸ್ಕ್ಃ ಪಾನ ನಿಷೇಧ ಕಾಯ್ದೆ ಜಾರಿಗೊಳಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯನ್ನು ಇಟ್ಟಿರುವ ಆಂದ್ರ ಪ್ರದೇಶದ ಸರ್ಕಾರ ಇದೇ ಅಕ್ಟೋಬರ್‌ 1 ರಿಂದ ಮಧ್ಯದ ಅಂಗಡಿಗಳನ್ನು ತನ್ನ ವಶಕ್ಕೆ ಪಡೆಯುವ ಪ್ರಕ್ರಿಯೆಗೆ ಚಾಲನೆ ನೀಡಲಿದೆ.

ಈ ಕುರಿತು ಹೇಳಿಕೆ ನೀಡಿರುವ ಆಂದ್ರಪ್ರದೇಶದ ಉಪ ಮುಖ್ಯಮಂತ್ರಿ ನಾರಾಯಣಸ್ವಾಮಿ, ಇಲ್ಲಿನ ಬೆವರೇಜನ್ ಕಾರ್ಫೋರೇಷನ್ ಲಿಮಿಟೆಡ್ ಮೂಲಕ ಎಲ್ಲಾ ಮಧ್ಯದ ಅಂಗಡಿಗಳನ್ನು ವಶಕ್ಕೆ ಪಡೆಯಲಾಗುತ್ತದೆ ಎಂದು ತಿಳಿಸಿದ್ದಾರೆ.

4380 ಮಧ್ಯದ ಅಂಗಡಿಗಳಲ್ಲಿ ಈಗಾಗಲೇ 3500 ಕ್ಕೆ ಇಳಿಸಲಾಗಿದೆ. ನಂತರ ಹಂತ ಹಂತವಾಗಿ ಅಂಗಡಿಗಳನ್ನು ಸ್ಥಗಿತಗಿಸಲಾಗುವದು ಮಾರಾಟ ಮೊಟಕುಗೊಳಿಸುವ‌ ಮೂಲಕ ಪಾನ ನಿಷೇಧದತ್ತ ಗುರಿ ತಲುಪಲಿದೆ. ಈ ಹಿಂದೆ ಹೇಳಿದಂತೆ ಸರ್ಕಾರ ಕಾರ್ಯನಿರ್ವಿಸುತ್ತಿದೆ ಎನ್ನಲಾಗಿದೆ.

Related Articles

Leave a Reply

Your email address will not be published. Required fields are marked *

Back to top button