ಪ್ರಮುಖ ಸುದ್ದಿ
ತ್ರಿವಳಿ ತಲಾಖ್ ಅಂಗೀಕಾರ : ಪ್ರತಿಪಕ್ಷಗಳಿಂದ ತೀವ್ರ ವಿರೋಧ
ನವದೆಹಲಿ: ಪ್ರತಿಪಕ್ಷಗಳ ವಿರೋಧದ ನಡುವೆಯೇ ಇಂದು ಲೋಕಸಭೆಯಲ್ಲಿ ವಿವಾದಾತ್ಮಕ ತ್ರಿವಳಿ ತಲಾಖ್ ಮಸೂದೆ ಅಂಗೀಕಾರವಾಗಿದೆ. ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಇಂದು ಬೆಳಗ್ಗೆ ಮತ್ತೊಮ್ಮೆ ತ್ರಿವಳಿ ತಲಾಖ್ ಮಸೂದೆ ಮಂಡಿಸಿದರು. ಮಸೂದೆ ಪರ ಹಾಗೂ ವಿರೋಧಗಳ ಸಂಬಂಧ ತೀವ್ರ ಚರ್ಚೆಗಳಿಗೆ ಕಲಾಪ ಸಾಕ್ಷಿಯಾಯಿತು.
ಕಾಂಗ್ರೆಸ್ ನ ಅಭಿಷೇಕ್ ಮನು ಸಿಂಘ್ವಿ ಮತ್ತು ತೃಣಮೂಲ ಕಾಂಗ್ರೆಸ್ನ ಡೆರೆಕ್ ಓ ತ್ರಿವಳಿ ತಲಾಖೆಗೆ ವಿರೋಧ ವ್ಯಕ್ತಪಡಿಸಿದರು. ಆದರೆ, 20 ಮುಸ್ಲಿಂ ರಾಷ್ಟ್ರಗಳಲ್ಲಿ ತ್ರಿವಳಿ ತಲಾಖ್ ಜಾರಿಯಲ್ಲಿದೆ. ಈ ಮಸೂದೆ ಧರ್ಮಾಧಾರಿತ ಅಲ್ಲ ಎಂದು ಸಚಿವ ರವಿಂಶಕರ್ ಪ್ರಸಾದ್ ವಾದಿಸಿದರು. ಕೊನೆಗೆ ಎನ್ಡಿಎ ಒಕ್ಕೂಟ ಮಸೂದೆಯನ್ನ ವೋಟಿಗೆ ಹಾಕಿತು. ಆದರೆ ಈ ವೇಳೆ ತ್ರಿವಳಿ ತಲಾಖ್ ಮಸೂದೆ ವಿರೋಧಿಸಿದ್ದ ಕಾಂಗ್ರೆಸ್, ತೃಣಮೂಲಕ ಕಾಂಗ್ರೆಸ್ ಹಾಗೂ ಜೆಡಿಎಯು ಸಂಸದರು ಹೊರನಡೆದರು.