ಪ್ರಮುಖ ಸುದ್ದಿ

8 ರಾಜ್ಯಗಳಲ್ಲಿ ಹಿಂದೂಗಳೇ ಅಲ್ಪಸಂಖ್ಯಾತರು.! ಸುಪ್ರೀಂ ಹೇಳಿದ್ದೇನು.?

ಭಾರತದ 8 ರಾಜ್ಯಗಳಲ್ಲಿ ಹಿಂದೂಗಳೇ ಅಲ್ಪಸಂಖ್ಯಾತರು.! ಸುಪ್ರೀಂ ಹೇಳಿದ್ದೇನು.?

ವಿವಿ‌ ಡೆಸ್ಕ್ಃ ದೇಶದ 8 ರಾಜ್ಯಗಳಲ್ಲಿ ಈಗಾಗಲೇ ಹಿಂದೂಗಳ ಜನ ಸಂಖ್ಯೆ ಕ್ಷೀಣಿಸಿದ್ದು, ಆಯಾ ರಾಜ್ಯಗಳಲ್ಲಿ ಹಿಂದೂಗಳಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಬೇಕೆಂದು ವಕೀಲೆ ಅಶ್ವಿನಿ‌ ಉಪಾಧ್ಯಾಯ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಳು.

ವಕೀಲೆ ಅಶ್ವಿನಿ‌ ಸಲ್ಲಿಸಿದ್ದ ಅರ್ಜಿಯಲ್ಲಿ ದೇಶದ ಜಮ್ಮು ಕಾಶ್ಮೀರ, ಪಂಜಾಬ, ಲಕ್ಷದೀಪ, ಮಿಜೋರಾಂ, ನಾಗಾಲ್ಯಾಂಡ್, ಮೇಘಾಲಯ, ಅರುಣಾಚಲ ಪ್ರದೇಶ, ಮಣಿಪುರ ರಾಜ್ಯಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತ ರಾಗಿದ್ದು, ಇವರಿಗೂ ಅಲ್ಪಸಂಖ್ಯಾತರಿಗೆ ನೀಡುವ ಸೌಲಭ್ಯವನ್ನು ಕಲ್ಪಸಬೇಕು ಎಂದು ಸುಪ್ರೀಂಕೋರ್ಟ್ ನಲ್ಲಿ ಸಲ್ಲಿಸಿದ ಅರ್ಜಿಯಲ್ಲಿ ಮನವಿ ಮಾಡಿದ್ದರು.

ಈ‌ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಾಧೀಶರು ಭಾಷೆಗಳ‌ ಆಧಾರದ ಮೇಲೆ‌ ರಾಜ್ಯಗಳನ್ನು ರಚಿಸಲಾಗಿದೆ. ಆದರೆ ಧರ್ಮವು ಎಲ್ಲಾ ರಾಜಕೀಯ ಮತ್ತು ಗಡಿಗಳನ್ನು ಮೀರಿದ್ದಾಗಿದೆ, ಹೀಗಾಗಿ ಯಾವುದೇ ಮಾರ್ಗಸೂಚಿ ಗಳನ್ನು ನಗದಿಪಡಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟ ಪಡಿಸಿದೆ ಎನ್ನಲಾಗಿದೆ.

Related Articles

Leave a Reply

Your email address will not be published. Required fields are marked *

Back to top button