ಪ್ರಮುಖ ಸುದ್ದಿ

ತಿಲಕ ಭಯ : ಚರ್ಚೆಗೆ ಗ್ರಾಸವಾಗಿದೆ ಮಾಜಿ ಸಿಎಂ ಸಿದ್ಧರಾಮಯ್ಯ ನಡೆ!

ಬಾಗಲಕೋಟೆ : ತಿಲಕ ಕಂಡರೆ ಭಯ ಆಗುತ್ತದೆ ಎಂದು ಹೇಳಿದ್ದ ಮಾಜಿ ಸಿಎಂ ಸಿದ್ಧರಾಮಯ್ಯ ಅವರ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇಂದು ಬಾದಾಮಿ ಪಟ್ಟಣದಲ್ಲಿ ರಕ್ಷಾ ಬಂಧನ ವೇಳೆ ತಿಲಕವಿಡಲು ಮುಂದಾದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಸಹೋದರಿಗೆ ಸಿದ್ಧರಾಮಯ್ಯ ತಿಲಕವಿಡದಂತೆ ಸೂಚಿಸಿದ್ದಾರೆ. ಆ ಮೂಲಕ ಸಿದ್ಧರಾಮಯ್ಯ ಅವರ ನಡೆ ಬಗ್ಗೆ ಮತ್ತೆ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಮಹಿಳೆ ರಾಖಿ ಕಟ್ಟಿ ತಿಲಕವಿಡಲು ಮುಂದಾದಾಗ ಸಿದ್ಧರಾಮಯ್ಯ ಅವರು ತಡೆದಿರುವ ಫೋಟೋ,  ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

Related Articles

Leave a Reply

Your email address will not be published. Required fields are marked *

Back to top button