ಪ್ರಮುಖ ಸುದ್ದಿ
ನಾನು ಗೆದ್ರೆ 24 ಗಂಟೆಯಲ್ಲಿ ಮಂತ್ರಿ ಮಾಡ್ತಾರೆ- ಎಂಟಿಬಿ ನಾಗರಾಜ
ಹೊಸಕೋಟೆಃ ನಾವೆಲ್ಲ ಪಕ್ಷಬಿಟ್ಟು ಹೋಗಲು ಕುಮಾರಸ್ವಾಮಿ ಕಾರಣ. ನಮ್ಮ ಕ್ಷೇತ್ರದ ಅಭಿವೃದ್ಧಿಗೆ ಬಿಡಿಗಾಸು ಬಿಡುಗಡೆಮಾಡಲಿಲ್ಲ.
ನಮ್ಮ ಕ್ಷೇತ್ರದ ಸಮಸ್ಯೆ, ಸ್ಥಿತಿಗತಿ ಕುರಿತು ಸಿದ್ರಾಮಯ್ಯನು ಕೇಳಲಿಲ್ಲ. ಹೀಗಾಗಿ ಪಕ್ಷ ಬಿಡಬೇಕಾಯಿತು ಎಂದು ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ ತಿಳಿಸಿದರು.
ಕ್ಣೇತ್ರದ ನಂದಗುಡಿ ಗ್ರಾಮದಲ್ಲಿ ಪ್ರಚಾರ ಸಭೆಯ ನಂತರ ಮಾಧ್ಯಮಕ್ಕೆ ಹೇಳಿಕೆ ನೀಡಿದ ಅವರು, ನಾನು ಗೆದ್ರೆ 24 ಗಂಟೆಯಲ್ಲಿ ಮಂತ್ರಿ ಮಾಡ್ತಾರೆ ಎದುರಾಳಿ ಪಕ್ಷದ ಅಭ್ಯರ್ಥಿ ಯನ್ನು ಮಾಡಲು ಸಾಧ್ಯವೇ.? ಎಂದು ಅವರು ಪ್ರಶ್ನಿಸಿದ್ದಾರೆ.