ಪ್ರಮುಖ ಸುದ್ದಿ
ರೆಡ್ ಹ್ಯಾಂಡಾಗಿ ಎಸಿಬಿ ಬಲೆಗೆ ಬಿದ್ದ ಬಿಸಿಎಂ ಹಾಸ್ಟಲ್ ಸುಪರಡೆಂಟ್!
ಕಲಬುರಗಿ : ಜಿಲ್ಲೆಯ ಸೇಡಂ ಪಟ್ಟಣದ ಬಿಸಿಎಂ ಕಚೇರಿಯಲ್ಲಿ ಲಂಚ ಸ್ವೀಕರಿಸುತ್ತಿದ್ದ ಸುಪರಡೆಂಟ್ ಯಮನಪ್ಪ ರೆಡ್ ಹ್ಯಾಂಡಾಗಿ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಹಾಸ್ಟಲ್ ವಾರ್ಡನ್ ನಾಗಮ್ಮ ಎಂಬುವರ ನಾಲ್ಕು ತಿಂಗಳ ಸಂಬಳ ಮಾಡಿಕೊಡಲು ಲಂಚ ಸ್ವೀಕರಿಸುವ ವೇಳೆ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಖಚಿತ ಮಾಹಿತಿ ಮೇರೆ ಭ್ರಷ್ಟಾಚಾರ ನಿಗ್ರಹ ದಳದ ಇನ್ಸಪೆಕ್ಟರ್ ಕಲ್ಲೇದೇವರ್ ನೇತೃತ್ವದ ತಂಡ ದಾಳಿ ನಡೆಸಿದೆ. ಹೀಗಾಗಿ, ಕಚೇರಿಯಲ್ಲೇ ಲಂಚದ ಹಣ ಪಡೆಯುತ್ತಿದ್ದ ಅಧಿಕಾರಿ ಸಿಕ್ಕಿಬಿದ್ದಿದ್ದಾರೆ. ಭ್ರಷ್ಟ ಅಧಿಕಾರಿ ಯಮನಪ್ಪ ಅವರನ್ನು ವಶಕ್ಕೆ ಪಡೆದು ಎಸಿಬಿ ಅಧಿಕರಿಗಳು ತನಿಖೆ ನಡೆಸುತ್ತಿದ್ದಾರೆ.