ಪ್ರಮುಖ ಸುದ್ದಿ

ಲಗ್ನ ಪತ್ರಿಕೆ ಹಂಚಲು ತೆರಳಿದ್ದ ತಾಯಿ – ಮಗ ಸಾವು!

ತುಮಕೂರು : ಜಿಲ್ಲೆಯ ಮಧುಗಿರಿ ತಾಲೂಕಿನ ಪಡಸಾಲೆಹಟ್ಟಿ ಗ್ರಾಮದ ಬಳಿ ಬೈಕಿಗೆ ಕಾರು ಡಿಕ್ಕಿಯಾಗಿದೆ. ಪರಿಣಾಮ ಬೈಕಿನಲ್ಲಿದ್ದ ತಾಯಿ ಕಂಬಕ್ಕ (48) ಹಾಗೂ ಪುತ್ರ ಮಂಜುನಾಥ್ (26) ಸಾವಿಗೀಡಾದ ದುರ್ಘಟನೆ ನಡೆದಿದೆ. ಮಾಡಗಾನಹಟ್ಟಿ ಗ್ರಾಮದ ಕಂಬಕ್ಕ ಮತ್ತು ಮಂಜುನಾಥ ಅವರು ಮದುವೆ ಆಮಂತ್ರಣ ಪತ್ರಿಕೆ ಹಂಚಲು ತೆರಳಿದ್ದರು ಎಂದು ತಿಳಿದು ಬಂದಿದೆ.

ಅಪಘಾತ ಪ್ರಕರಣದ ಮಾಹಿತಿ ತಿಳಿಯುತ್ತಿದ್ದಂತೆಯೇ ಮಿಡಿಗೇಶಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮದುವೆ ಮನೆಯಲ್ಲಿ ದುಖ: ಮಡುಗಟ್ಟಿದೆ. ಹೀಗಾಗಿ, ಪೊಲೀಸರ ತನಿಖೆಯಿಂದಾಗಿ ಅಪಘಾತಕ್ಕೆ ನಿಖರವಾದ ಕಾರಣವೇನೆಂಬುದು ತಿಳಿದು ಬರಬೇಕಿದೆ.

Related Articles

Leave a Reply

Your email address will not be published. Required fields are marked *

Back to top button