ಸಚಿವರಿಗೆ ದೂರವಾಣಿ ಕರೆ : ಸಮಸ್ಯೆ ಇತ್ಯರ್ಥಕ್ಕೆ ದರ್ಶನಾಪುರ ಮನವಿ
ಕೃಷಿ ವಿದ್ಯಾರ್ಥಿಗಳ ನಿರಂತರ ಧರಣಿ ಸ್ಥಳಕ್ಕೆ ದರ್ಶನಾಪುರ ಭೇಟಿ
ಯಾದಗಿರಿಃ ಕೃಷಿ ವಿಶ್ವವಿದ್ಯಾಲಯಗಳು ಖಾಸಗೀಕರಣಗೊಳಿಸುತ್ತಿರುವದನ್ನು ವಿರೋಧಿಸಿ ಕಳೆದ ಒಂದು ವಾರಗಳಿಂದ ಜಿಲ್ಲೆಯ ಶಹಾಪುರ ಸಮೀಪದ ಭೀಮರಾಯನ ಗುಡಿ ಕೃಷಿ ಮಹಾವಿದ್ಯಾಲಯದ ಆವರಣದಲ್ಲಿ ಕೃಷಿ ಕಾಲೇಜು ವಿದ್ಯಾರ್ಥಿಗಳು ನಿರಂತರ ಕೈಗೊಂಡ ಧರಣಿ ಸ್ಥಳಕ್ಕೆ ಸೋಮವಾರ ಸ್ಥಳೀಯ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಭೇಟಿ ನೀಡಿ, ವಿದ್ಯಾರ್ಥಿಗಳ ಸಮಸ್ಯೆ ಮತ್ತು ಬೇಡಿಕೆಗಳ ಬಗ್ಗೆ ಚರ್ಚೆ ನಡೆಸಿದರು.
ಕೃಷಿ ವಿವಿ ಸಮಸ್ಯೆ ಅರಿತ ದರ್ಶನಾಪುರ, ಸಂಬಂಧಿಸಿದ ಕೃಷಿ ಮಂತ್ರಿ ಬಂಡೆಪ್ಪ ಖಾಸಿಂಪುರ ಮತ್ತು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೆಗೌಡ ಅವರೊಂದಿಗೆ ದೂರವಾಣಿ ಸಂಪರ್ಕ ಸಾಧಿಸಿ ಕೃಷಿ ವಿದ್ಯಾರ್ಥಿಗಳ ಸಮಸ್ಯೆ ಇತ್ಯರ್ಥಕ್ಕೆ ಮನವಿ ಮಾಡಿದರು.
ದರ್ಶನಾಪುರ ಅವರಿಂದ ಸಮರ್ಪಕ ಮಾಹಿತಿ ಪಡೆದ ಸಚಿವರು, ಕೂಡಲೇ ಸಮಸ್ಯೆ ಪರಿಹಾರಕ್ಕೆ ಸೂಕ್ತ ಕ್ರಮಕೈಗೊಳ್ಳುವದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ದೂರವಾಣಿಯಲ್ಲಿ ಮಾತನಾಡಿರುವ ಕುರಿತು ತಿಳಿಸಿದ ಅವರು, ಕೃಷಿ ವಿಶ್ವವಿದ್ಯಾಲಯ ಖಾಸಗೀಕರಣ ಗೊಳಿಸುತ್ತಿದ್ದು, ಇದರಿಂದ ಪ್ರಸಕ್ತ ಅಭ್ಯಾಸದಲ್ಲಿ ತೊಡಗಿಸಿಕೊಂಡು ಪರೀಕ್ಷೆ ಬರೆಯವು ವಿದ್ಯಾರ್ಥೀಗಳಲ್ಲಿ ಆತಂಕ ಮನೆ ಮಾಡಿದೆ.
ಕಳೆದ ವಾರದಿಂದ ಕೃಷಿ ಕಾಲೇಜು ವಿದ್ಯಾರ್ಥಿಗಳು ಹಾಸ್ಟೆಲ್ಗಳನ್ನು ತ್ಯೇಜಿಸಿ ನಿರಂತರ ಧರಣಿಯಲ್ಲಿ ಭಾಗವಹಿಸಿ, ಕೃಷಿ ವಿವಿ ವಿಧ್ಯಾರ್ಥಿಗಳ ಬೇಡಕೆಗಳನ್ನು ಗಣನೆಗೆ ತೆಗೆದುಕೊಂಡು ಸೂಕ್ತ ಪರಿಹಾರ ನೀಡಬೇಕು. ಈ ಅವ್ಯವಸ್ಥೆಗಳಿಂದ ಮಕ್ಕಳ ಭವಿಷ್ಯ ಹಾಳಾಗುತ್ತದೆ ಎಂದು ತಿಳಿಸಿದರು.
ಹಾಲಿ ಶಾಸಕ ಶರಣಬಸ್ಸಪ್ಪಗೌಡ ದರ್ಶನಾಪುರವರು, ಸಂಬಂಧಪಟ್ಟ ಸಚಿವರಿಗೆ ದೂರವಾಣಿ ಮುಖಾಂತರ ಮನವರಿಕೆ ಮಾಡಿದರು. ಕಾಲೇಜು ಪ್ರಾರಂಭಗೊಂಡ ಹಲವಾರು ದಿನಗಳು ಕಳೆದರೂ ಈ ವಿದ್ಯಾಥಿಗಳು ತಮ ್ಮಕಾಲೇಜು ಖಾಸಗಿರಣ ಬೇಡವೆಂದು ಒಕ್ಕೂರಿಲಿನಿಂದ ಸತ್ಯಾಗ್ರಹ ನಿರತರ ಹೋರಾಟ ನೆಡೆಯುತ್ತಿದ್ದರೂ ಇತ್ತ ಕಾಲೇಜು ಕುಲಪತಿಗಳು ಗಮನ ಹರಿಸುತ್ತಿಲ್ಲವೆಂದು ಬೇಸರ ವ್ಯಕ್ತಪಡಸಿದರು.
ಕೂಡಲೆ ರಾಜ್ಯದ ಸಚಿವರು ಈ ಕುರಿತು ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ತಿಳಿಸಿದರು. ವಿಧ್ಯಾರ್ಥಿಗಳ ಬೇಡಿಕೆಗೆಳಿಗೆ ಸ್ಪಂಧಿಸುವದಾಗಿ ಸಚಿವರಿಬ್ಬರು ಕೃಷಿ ವಿವಿ ವಿದ್ಯಾರ್ಥಿಗಳು ಶಾಸಕರಿಗೆ ಮನವಿ ಪತ್ರ ಸಲ್ಲಿಸಿದರು. ಈ ಸತ್ಯಾಗ್ರಹದಲ್ಲಿ ಕೃಷಿ ವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿದ್ದರು.