ಪ್ರಮುಖ ಸುದ್ದಿ

ಅಥಣಿ ಶಾಸಕ ಕುಮಟಳ್ಳಿಗೆ MSIL ಅಧ್ಯಕ್ಷ ಸ್ಥಾನ ನೀಡಿ ಆದೇಶ

ಶಾಸಕ‌ ಕುಮಟಳ್ಳಿಗೆ ಸಂಪುಟ ದರ್ಜೆ ಸ್ಥಾನಮಾನ‌ ನೀಡಿದ‌ BSY

ವಿವಿ‌ಡೆಸ್ಕ್ಃ ಅಥಣಿ ಶಾಸಕ ಮಹೇಶ ಕುಮಟಳ್ಳಿ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ದೊರೆಯಲಿಲ್ಲ ಎಂಬ ಬೇಸರ ಉಂಟಾದ ಬೆನ್ನಲ್ಲೆ‌ ಸಿಎಂ ಬಿಎಸ್ ವೈ ಇದೀಗ ಸಂಪುಟ‌‌ ದರ್ಜೆಯ ಸ್ಥಾನಮಾನಕ್ಕೆ ಸಮನಾದ ಎಂಎಸ್ಐಎಲ್‌ ಅಧ್ಯಕ್ಷರಾಗಿ ನೇಮಿಸಿ ಆದೇಶ ಹೊರಡಿಸಿದ್ದಾರೆ.

ಕುಮಟಳ್ಳಿ ಅವರು ಬೆಳಗಾವಿಯ ರಮೇಶ‌ ಜಾರಕಿಹೊಳಿ ಅವರ ಜೊತೆ ಸೇರಿ ಶಾಸಕ ಸ್ಥಾನಕ್ಕೆ ರಾಜೀನಾಮೆ‌ ನೀಡಿ ಬಿಜೆಪಿ ಯಿಂದ ಬೈ ಎಲೆಕ್ಷನ್ ನಲ್ಲಿ‌‌ ಗೆಲುವು ಸಾಧಿಸಿದ್ದರು.

ಕುಮಟಳ್ಳಿ ಅವರಿಗೂ ಸಚಿವ ಸ್ಥಾನ ದೊರೆಯಲಿದೆ ಎಂಬ ಮಾತುಗಳು ಕೇಳಿ ಬಂದಿದ್ದವು ಆದರೆ, ಅನಿವಾರ್ಯ ಸ್ಥಿತಿಯಲ್ಲಿ ಸಚಿವ ಸ್ಥಾನ ಅವರಿಗೆ ಒಲಿಯಲಿಲ್ಲ. ಆದರೆ ಬಿಎಸ್ ವೈ ಅವರು ಅದೇ ಸ್ಥಾನಮಾನದ ಎಂಎಸ್ ಐಎಲ್ ಅಧ್ಯಕ್ಷ ಜವಬ್ದಾರಿ ನೀಡಿದ್ದಾರೆ.

ಕುಮಟಳ್ಳಿ‌ ನಿರಾಕರಣೆ – ಶೈಕ್ಷಣಿಕ ಅರ್ಹತೆಗೆ ತಕ್ಕ‌ ಮಂಡಳಿ ನೀಡಿ

ಎಂಎಸ್ ಐಎಲ್ ಅಧ್ಯಕ್ಷ ಸ್ಥಾನವನ್ನು ನಯವಾಗಿ ತಿರಸ್ಕಾರ‌ ಮಾಡಿದ ಶಾಸಕ‌ ಕುಮಟಳ್ಳಿ, ತನ್ನ ಸಿವಿಲ್ ಇಂಜಿನಿಯರಿಂಗ್ ಶೈಕ್ಷಣಿಕ ಅರ್ಹತೆಗೆ ತಕ್ಕಂತೆ ಮಂಡಳಿ ನಿಗಮ ಜವಬ್ದಾರಿ‌ ನೀಡಿದ್ದಲ್ಲಿ ಸಮರ್ಪಕವಾಗಿ ನಿಭಾಯಿಸುವೆ ಎಂದು ಮಾಧ್ಯಮಕ್ಕೆ‌ ಪ್ರತಿಕ್ರಿಯೆ ನೀಡಿದ್ದಾರೆ.

ಸರ್ಕಾರ ಆದೇಶ ಹೊರಡಿಸಿದ ಬೆನ್ನಲ್ಲೆ ಕುಮಟಳ್ಳಿ ನಿರಾಕರಿಸಿ ಬೇರೆ ಹುದ್ದೆ ಮೇಲೆ ಕಣ್ಣಿಟ್ಟಿದ್ದು, ಅದನ್ನು ಕೊಡುವಂತೆ‌ ಇನ್ ಡೈರೆಕ್ಟ್ ಆಗಿ ಒತ್ತಾಯಿಸಿರುವಂತೆ ಕಂಡು ಬಂದಿತು.

Related Articles

Leave a Reply

Your email address will not be published. Required fields are marked *

Back to top button