ಪ್ರಮುಖ ಸುದ್ದಿ

ಗಾಳಿಯಲ್ಲಿ ಗುಂಡು : ಇಬ್ಬರು ಯುವಕರ ಬಂಧನ!

ಧಾರವಾಡ: ನಗರದ ಹೊರವಲಯದ ರೆಸಾರ್ಟಿನಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ನಡೆದಿದೆ. ಪರಿಣಾಮ ರೆಸಾರ್ಟಿನಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣ ಆಗಿದೆ. ಹೀಗಾಗಿ, ಪೊಲೀಸರಿಗೆ ಈ ಬಗ್ಗೆ ಮಾಹಿತಿ ರವಾನೆ ಆಗುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಗುಂಡು ಹಾರಿಸಿದ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಹನುಮಂತಗೌಡ ಮತ್ತು ರಾಘವೇಂದ್ರ ಎಂಬ ಯುವಕರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಬಂಧಿತರ ಹಿನ್ನೆಲೆಯನ್ನು ಪೊಲೀಸರು ಕಲೆ ಹಾಕುತ್ತಿದ್ದು ಗಾಳಿಯಲ್ಲಿ ಗುಂಡು ಹಾರಿಸಲು ಕಾರಣವೇನು. ಮತ್ತು ಇವರ ಬಳಿ ಇರುವು ವೆಪನ್ ಗೆ ಪರವಾನಿಗೆ ಇದೆಯೆ ಎಂಬುದರ ಬಗ್ಗೆ ಡಿಸಿಪಿ ರೇಣುಕಾ ಸುಕುಮಾರ್ ನೇತೃತ್ವದ ಟೀಮ್ ತನಿಖೆ ನಡೆಸುತ್ತಿದೆ ಎಂದು ಪೊಲೀಸ್ ಮೂಲದಿಂದ ತಿಳಿದು ಬಂದಿದೆ.

Related Articles

Leave a Reply

Your email address will not be published. Required fields are marked *

Back to top button