ಜನಮನ

ಕಳ್ಳರ ಕೈಯಲ್ಲಿ ಕಂಗೆಟ್ಟಿತು ಕಲಬುರಗಿ : ಪೊಲೀಸರೇ ದಯವಿಟ್ಟು ಎಚ್ಚರವಾಗಿ!!!

ಕಲಬುರಗಿ: ಬಿಸಿಲನಾಡು ಕಲಬುರಗಿ ನಗರಕ್ಕೆ ಅದ್ಯಾವ ಕಳ್ಳರ‌ ತಂಡ ದಾಳಿಯಿಟ್ಟಿದೆಯೋ ಗೊತ್ತಿಲ್ಲ. ನಿತ್ಯವೂ ಕಳ್ಳತನ ಪ್ರಕರಣಗಳು ಹೆಚ್ಚುತ್ತಲೇ ಸಾಗಿವೆ. ಮೊನ್ನೆಯಷ್ಟೇ ಆಳಂದ ಚಕ್ ಪೋಸ್ಟ್ ಸಮೀಪ ಏಕಕಾಲಕ್ಕೆ ಆರು ಅಂಗಡಿಗಳಿಗೆ ಕಳ್ಳರು ಕನ್ನ ಹಾಕಿದ್ದರು. ಅಂತೆಯೇ ನಿರಂತರವಾಗಿ ನಗರದ ವಿವಿದೆಡೆ ಹಲವು ಕಳ್ಳತನ ಪ್ರಕರಣಗಳು ನಡೆದಿವೆ. ಇಂದು ವಕೀಲರೊಬ್ಬರ ಮನೆ ಬೀಗ ಮುರಿದು ನಗ ನಾಣ್ಯ ದೋಚಿದ ಘಟನೆ ನಡೆದಿದೆ.

ಮೊನ್ನೆಯಷ್ಟೇ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದ ಕಳ್ಳರು ನಿನ್ನೆ‌ ತಡರಾತ್ರಿ ಮತ್ತೆ ಅದೇ ಮನೆಗೆ ಕನ್ನ ಹಾಕಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ಸಮಯದ ನಗರದ ಖೂಬಾ ಪ್ಲಾಟ್ ನಲ್ಲಿರುವ ವಕೀಲ ಶಂಕರರಾವ್ ಮನೆಗೆ ಕನ್ನ ಹಾಕಿದ ಕಳ್ಳರು 80 ಗ್ರಾಂ ಚಿನ್ನ, 30 ಸಾವಿರ ನಗದು ಕದ್ದಿ ಎಸ್ಕೇಪ್ ಆಗಿದ್ದಾರೆ. ಸ್ಟೇಷನ್ ಬಜಾರ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದಾರೆ.

ನಗರದಲ್ಲಿ ನಿರಂತರವಾಗಿ ನಡೆಯುತ್ತಿರುವ ಕಳ್ಳತನ ಪ್ರಕರಣಗಳಿಂದಾಗಿ‌ ಜನ ಆತಂಕಕ್ಕೆ ಒಳಗಾಗಿದ್ದಾರೆ. ಮೊನ್ನೆಯಷ್ಟೇ ಮನೆಯೊಂದರ ಕಳ್ಳತನ ಯತ್ನ ನಡೆಸಿದ್ದ ಕಳ್ಳರು ಮತ್ತದೇ ಮನೆ ಕಳ್ಳತನ ಮಾಡಿದ್ದಾರೆ. ಆದರೆ, ಪೊಲೀಸರು ಕಳ್ಳತನವನ್ನು ತಪ್ಪಿಸಲು ಸಾಧ್ಯವಾಗದೆ‌ ಇರುವುದು ಪೊಲೀಸರ ವಿರುದ್ಧ ಜನಾಕ್ರೋಶಕ್ಕೆ ಕಾರಣವಾಗಿದೆ.

ಇನ್ನಾದರೂ ಪೊಲೀಸರು ಎಚ್ಚೆತ್ತುಕೊಳ್ಳಬೇಕಿದೆ. ಶೀಘ್ರಗತಿಯಲ್ಲಿ ಕಳ್ಳರನ್ನು ಪತ್ತೆ ಹಚ್ಚಿ‌ ತಕ್ಕ ಶಿಕ್ಷೆ ವಿಧಿಸಬೇಕಿದೆ. ಆ ಮೂಲಕ ನಗರದಲ್ಲಿ ಹೆಚ್ಚಿರುವ ಕಳ್ಳತನ ಪ್ರಕರಣಕ್ಕೆ ಕಡಿವಾಣ ಹಾಕಬೇಕು. ಕಲಬುರಗಿಯ ಜನರಲ್ಲಿ ಕಳ್ಳರು ಮೂಡಿಸಿದ ಆತಂಕವನ್ನು ದೂರಾಗಿಸಬೇಕು ಎಂಬುದು ನಗರದ ನಾಗರೀಕರ ಆಗ್ರಹವಾಗಿದೆ.

Related Articles

Leave a Reply

Your email address will not be published. Required fields are marked *

Back to top button