ಪ್ರಮುಖ ಸುದ್ದಿ
#ShaShock : ಇನ್ನೂ ಮುಖ್ಯಮಂತ್ರಿಗೆ ಗೊತ್ತಿಲ್ಲ ಸಚಿವರ ಪಟ್ಟಿಯಲ್ಲಿರುವ ಹೆಸರು!
ಬೆಂಗಳೂರು: ದೆಹಲಿಗೆ ತೆರಳಿದ್ದ ಸಿಎಂ ಬಿಎಸ್ ವೈ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ, ಬಿಜೆಪಿ ಅದ್ಯಕ್ಷ ಅಮಿತ್ ಶಾ ಭೇಟಿ ಆಗಿ ಬಂದಿದ್ದಾರೆ. ಮಂಗಳವಾರ ಸಚಿವ ಸಂಪುಟ ರಚನೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದ್ದು ಸಚಿವರ ಪಟ್ಟಿಯನ್ನು ರವಿವಾರ ಮದ್ಯಾನ ಕಳಿಸುವುದಾಗಿ ಹೇಳಿದೆ. ಆದರೆ ಈವರೆಗೆ ಸಚಿವ ಸಂಪುಟ ಸೇರುವವರ ಪಟ್ಟಿಯೇ ಮುಖ್ಯಮಂತ್ರಿ ಕೈಸೇರಿಲ್ಲ. ಸಚಿವರು ಆಗುವವರು ಯಾರು ಎಂಬುದು ಖುದ್ದು ಸಿಎಂಗೆ ಖಚಿತವಾಗಿ ತಿಳಿದಿಲ್ಲ ಎನ್ನಲಾಗಿದೆ.
ಈವರೆಗೆ ಸಚಿವರ ಪಟ್ಟಿ ಸಿಎಂ ಕೈಗೆ ಸೇರದ ಹಿನ್ನೆಲೆ ಸಚಿವ ಸ್ಥಾನ ಆಕಾಂಕ್ಷಿಗಳಲ್ಲಿ ಟೆನ್ಷನ್ ಹೆಚ್ಚಿದೆ. ಸಿಎಂ ಯಡಿಯೂರಪ್ಪ ಅವರೂ ಸಹ ಅಮಿತ್ ಶಾ ಯಾವ ನಿರ್ಧಾರ ಕೈಗೊಳ್ಳುತ್ತಾರೋ, ಸರ್ಕಾರ ಮತ್ತು ತಮ್ಮ ಮೇಲೆ ಅದು ಯಾವ ಪರಿಣಾಮ ಬೀರಲಿದೆಯೋ ಎಂಬ ಚಿಂತೆಗೀಡಾಗಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.