ಬಾಬ್ರಿ ಮಸೀದಿ ಧ್ವಂಸ ದಿನಃ ಎಸ್ಡಿಪಿಐ ಕರಾಳ ದಿನಾಚರಣೆ
ಶಹಾಪುರಃ ಬಾಬ್ರಿ ಮಸೀದಿ ಧ್ವಂಸ ದಿನ- SDPI ಯಿಂದ ಕರಾಳ ದಿನಾಚರಣೆ
ಯಾದಗಿರಿಃ ಬಾಬ್ರಿ ಮಸೀದಿ ಧ್ವಂಸವಾಗಿ ಇಂದಿಗೆ 25 ವರ್ಷಗಳು ಗತಿಸಿವೆ. ಆದರೆ ಧ್ವಂಸಕ್ಕೆ ಕಾರಣರಾದವರನ್ನು ಬಂಧಿಸಲು ಭಾರತ ಸರ್ಕಾರದಿಂದ ಆಗಿಲ್ಲ. ಮಸೀದಿ ಧ್ವಂಸ ಪ್ರಕರಣದಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆ ನೀಡಬೇಕಿತ್ತು. ಆದರೆ ಅವರಿಗೆ ವಿವಿಧ ರೂಪದಲ್ಲಿ ಉನ್ನತ ಹುದ್ದೆ ನೀಡಿ ಸನ್ಮಾನಿಸಲಾಗುತ್ತಿದೆ. ಇದು ದೇಶದ ಸಂವಿಧಾನದ ವಿರೋಧಿ ನೀತಿಯಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯ ಶಹಾಪುರ ನಗರದ ನೂತನ ತಹಸೀಲ್ ಕಚೇರಿ ಎದುರು ಬಾಬ್ರಿ ಮಸೀದಿ ಧ್ವಂಸ ದಿನ ಅಂಗವಾಗಿ ಎಸ್ಡಿಪಿಐ ಶಹಾಪುರ ತಾಲೂಕು ಘಟಕದಿಂದ ಕರಾಳ ದಿನಾಚರಣೆ ಆಚರಿಸಲಾಯಿತು. ಮಸೀದಿ ಧ್ವಂಸ ಪ್ರಕರಣದ ಆರೋಪಿಗಳ ವಿರುದ್ಧ ಕ್ರಮಕ್ಕೆ ವಿಳಂಬ ನೀತಿ ಅನುಸರಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೆ ಮಸೀದಿ ಧ್ವಂಸದಿಂದ ದೇಶದ ಲಕ್ಷಾಂತರ ಮುಸ್ಲಿಂ ಸಮುದಾಯದವರಿಗೆ ಅನ್ಯಾಯವಾಗಿದೆ. ಅದರಿಂದ ಸಾಕಷ್ಟು ನೋವು ನಷ್ಟ ಅನುಭವಿಸಿದ್ದಾರೆ. ಕಳೆದ 25 ವರ್ಷದಿಂದ ಅನುಭವಿಸುತ್ತಾ ಬಂದಿದ್ದೇವೆ. ಮತ್ತು ಸಂಘ ಪರಿವಾರದ ನಾಯಕರು ಮುಸ್ಲಿಂ ಸಮುದಾಯದ ವಿರುದ್ಧ ಇಲ್ಲ ಸಲ್ಲದ ಹೇಳಿಕೆ ನೀಡುವ ಮೂಲಕ ಮುಸ್ಲಿಂ ಸಮುದಾಯದವರಲ್ಲಿ ಭಯ ಉಂಟು ಮಾಡುತ್ತಿದ್ದಾರೆ. ಆದಾಗ್ಯು ಸರ್ಕಾರ ಇಂತವರ ವಿರುದ್ಧ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ವಿಷಾಧಿಸಿದರು.
ಭಾರತದಲ್ಲಿ ಬದುಕುವ ಹಕ್ಕು ನಮಗೂ ಇದೆ. ಇಲ್ಲಿ ಮುಸ್ಲಿಂ ಭಾವನೆಗಳಿಗೆ ನೋವು ಉಂಟು ಮಾಡುವ ಮೂಲಕ ಶಾಂತಿ ಕದಡುವ ವ್ಯವಸ್ಥಿತ ಸಂಚು ನಡೆಯುತ್ತಿದೆ ಎಂದು ಆರೋಪಿಸಿದರು. ಇದೇ ಸಂದರ್ಭದಲ್ಲಿ ತಹಸೀಲ್ದಾರರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಮುಖಂಡರಾದ ಸಯ್ಯದ್ ಇಶಾಕ್ ಹುಸೇನ್, ಕೆ.ಎ.ಪಾಶಾ, ಖಲಿಂ ಉಲ್ಲಾ ಹುಸೇನಿ, ಮಹಿಬೂಬು ಗೋಗಿ, ಮಹ್ಮದ್ ಯುನೂಸ್, ಅಬ್ದುಲ್ ಸಲಾಂ, ಅ.ಸಲೀಂ, ರಿಯಾಜ್ ಅಹ್ಮದ್, ಇರ್ಫಾನ್, ಶೇಖ ಕಲಿಣ ತವಕಲಿ, ಶೀವಪುತ್ರ ಜವಳಿ, ಶಿವಕುಮಾರ ತಳವಾರ, ಸೈಯ್ಯದುದ್ದೀನ್ ಖಾದ್ರಿ, ಅಶ್ಫಕ್ ಸಗರ, ಜಹೀರ್ ಸಗರ, ನಜೀರ್ ಗೋಗಿ, ಮುಜಾಹಿದ್, ಖದೀರ ಅತ್ತಾರ, ಮೌಲಾನಾ ಮುಜೀಬ ಸೇರಿದಂತೆ ಇತರರಿದ್ದರು.