ಪ್ರಮುಖ ಸುದ್ದಿ
ಇಕ್ಕಟ್ಟಿನಲ್ಲಿ ಅನರ್ಹ ಶಾಸಕರು: ಮತ್ತೆ ಬಿಗ್ ಶಾಕ್ ನೀಡಿದ ಕಾಂಗ್ರೆಸ್!
ಬೆಂಗಳೂರು: ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇರೆಗೆ ಕಾಂಗ್ರೆಸ್ಸಿನ 14ಜನ ಶಾಸಕರು ಈಗಾಗಲೇ ಅನರ್ಹಗೊಂಡಿದ್ದಾರೆ. ಅಲ್ಲದೆ ಎಐಸಿಸಿ ಅನರ್ಹಗೊಂಡಿರುವ ಶಾಸಕರನ್ನು ಪಕ್ಷದಿಂದ ಉಚ್ಛಾಟಿಸಿ ಆದೇಶಿಸಿದೆ. ಇದೀಗ ಕೆಪಿಸಿಸಿ ಅದ್ಯಕ್ಷ ದಿನೇಶ್ ಗುಂಡೂರಾವ್ ಹೈಕೋರ್ಟ್ಗೆ ಕೇವಿಯಟ್ ಅರ್ಜಿ ಸಲ್ಲಿಕೆ ಮಾಡಿದ್ದು ಅನರ್ಹಗೊಂಡಿರುವ ಕಾಂಗ್ರೆಸ್ಸಿನ ಶಾಸಕರು ಸ್ಪೀಕರ್ ಆದೇಶ ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಬಹುದು. ಒಂದು ವೇಳೆ ಅರ್ಜಿ ಸಲ್ಲಿಸಿದಲ್ಲಿ ತಾವು ಮಧ್ಯಂತರ ಆದೇಶ ನೀಡುವ ಮೊದಲು ನಮ್ಮ ವಾದವನ್ನೂ ಆಲಿಸಿ ಎಂದು ಕೆಪಿಸಿಸಿ ಅದ್ಯಕ್ಷ ದಿನೇಶ್ ಗುಂಡೂರಾವ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಆ ಮೂಲಕ ಕಾಂಗ್ರೆಸ್ ಅನರ್ಹ ಶಾಸಕರಿಗೆ ಮತ್ತೊಂದು ಶಾಕ್ ನೀಡಿದು ಮುಂದಿನ ಹಾದಿ ಕಷ್ಟ ಎಂಬ ಸಂದೇಶವನ್ನು ರವಾನಿಸಿ ಇಕ್ಕಟ್ಟಿಗೆ ಸಿಲುಕಿಸಿದೆ.