ಪ್ರಮುಖ ಸುದ್ದಿ
ಬಿಜೆಪಿ ರಾಜ್ಯಧ್ಯಕ್ಷರಿಗೆ ರಾಜ್ಯದ ಜಿಲ್ಲೆಗಳೆಷ್ಟು ಗೊತ್ತಿಲ್ಲವೇ.?
ಯಾದಗಿರಿಃ ಕಾರ್ಯಕರ್ತರ ಭೇಟಿ, ಮತಗಟ್ಟೆ, ಸಂಘಟನೆ ಪರ್ವ ಸೇರಿದಂತೆ ರಾಜ್ಯದಲ್ಲಿ ಬಿಜೆಪಿ ಬಲಿಷ್ಠ ಕಾರ್ಯಕರ್ತರ ಪಡೆ ಕಟ್ಟಲು ನಾನು ರಾಜ್ಯವನ್ನು ಸುತ್ತುತ್ತಿದ್ದೇನೆ ಎಂದ ಬಿಜೆಪಿ ರಾಜ್ಯಧ್ಯಕ್ಷ ಇಂದು ರಾಜ್ಯದ 31 ನೇ ಜಿಲ್ಲಾ ಮುಗಿಸಿ 32 ನೇ ಜಿಲ್ಲೆ ಯಾದಗಿರಿಗೆ ಬಂದಿದ್ದೇನೆ ಎನ್ನುವ ಮೂಲಕ ರಾಜ್ಯದಲ್ಲಿ ಎಷ್ಟು ಜಿಲ್ಲೆಗಳಿವೆ ಎಂಬುದನ್ನು ಬಿಜೆಪಿ ರಾಜ್ಯದ್ಯಕ್ಷ ನಳೀನಕುಮಾರ ಕಟೀಲು ಅವರು ಮರೆತಿದ್ದಾರೆ ಇಲ್ಲ ಸಮರ್ಪಕ ಮಾಹಿತಿ ಪಡೆಯದೇ ಮಾತನಾಡಿದ್ದಾರೆ ಎಂಬುದು ಇಲ್ಲಿ ಮೇಲ್ನೋಟಕ್ಕೆ ಕಂಡು ಬಂದಿತು.
ಸಂಘಟನೆ ಮಾಡುವ ಭರಾಟೆಯಲ್ಲಿ ರಾಜ್ಯ ಸಂಚಾರ ಕೈಗೊಂಡ ನೂತನ ಬಿಜೆಪಿ ಸಾರಥಿ ನಳೀನಕುಮಾರ ಕಟೀಲು ಅವರಿಗೆ ರಾಜ್ಯದಲ್ಲಿ 30 ಜಿಲ್ಲೆಗಳು ಮಾತ್ರ ಇವೆ ಎಂಬುದು ತಿಳಿದಿಲ್ಲ.
ಹೀಗಾಗಿ ಯಾದಗಿರಿ 32 ನೇ ಜಿಲ್ಲೆಗೆ ಬಂದಿದ್ದೇನೆ ಎಂದರು. ಇನ್ನೆಷ್ಟು ಜಿಲ್ಲೆಗಳಿವೆಯೋ ಕಟೀಲು ಅವರ ಪ್ರಕಾರ ತಿಳಿಯುತ್ತಿಲ್ಲ. ಮುಂದಿನ ಜಿಲ್ಲೆಗೆ ಹೋಗಿ 33 ನೇ ಜಿಲ್ಲೆ ಎಂದರೂ ಅಡ್ಡಿಯಿಲ್ಲ ಎಂದು ನಾಗರಿಕರು ಮಾತನಾಡಿಕೊಳ್ಳುತ್ತಿದ್ದಾರೆ.