ಬಜೆಟ್ ನಲ್ಲಿ ಬೂದಿಹಾಳ-ಪೀರಾಪುರ ಹೆಸರು ಆಟಕ್ಕುಂಟು ಲೆಕ್ಕಕ್ಕಿಲ್ಲ-ಗುರು ಪಾಟೀಲ್
ಪರೋಕ್ಷವಾಗಿ ದರ್ಶನಾಪುರರನ್ನು ಲೇವಡಿ ಮಾಡಿದ ಶಾಸಕ ಗುರು ಪಾಟೀಲ್
ನಿಮ್ಮದೆ ಸರ್ಕಾರವಿದ್ದು ಕೆಂಭಾವಿ ತಾಲೂಕವನ್ನಾಗಿ ಏಕೆ ಮಾಡಲಿಲ್ಲ..ಶಾಸಕರ ಪ್ರಶ್ನೆ
ಯಾದಗಿರಿಃ ಜಿಲ್ಲೆಯ ಶಹಾಪುರ ನಗರದದ ಚರಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಡೆದ ಬಿಜೆಪಿ ನವಶಕ್ತಿ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಗುರು ಪಾಟೀಲ್ ಶಿರವಾಳ, ಕ್ಷೇತ್ರದ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಿದ್ದು, ಹಿಂದಿನ ಶಾಸಕರು ಮಾಡದ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಶಾಸಕನಾಗಿ ಪ್ರಮಾಣ ವಚನ ಸ್ವೀಕರಿಸಿದ ದಿನದಿಂದ ಕ್ಷೇತ್ರದ ಅಭಿವೃದ್ಧಿಗೆ ಬೇಕಾದ ಹಲವಾರು ಯೋಜನೆಗಳ ಕುರಿತು ರೂಪರೇಷೆಗಳನ್ನು ತಯಾರಿಸಿ ಅದರಂತೆ ಮುನ್ನೋಡಿ ಕೆಲಸ ಮಾಡಿಕೊಂಡು ಬಂದಿದ್ದೇನೆ.
ಕಳೆದ ಚುನಾವಣೆಯಲ್ಲಿ ಎಲ್ಲಾ ಯುವ ಸಮೂಹ ಚುರುಕಾಗಿ ಕೆಲಸ ಮಾಡಿ ನನ್ನನ್ನು ಗೆಲ್ಲಿಸಿರುವುದು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅದರಂತೆ ಬರುವ ಚುನಾವಣೆ ಯಲ್ಲೂ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ.
ನಾನು ಎಷ್ಟರಮಟ್ಟಿಗೆ ಕೆಲಸ ಮಾಡಿದ್ದೇನೆ ಎಂಬುದು ಕ್ಷೇತ್ರದವರಾದ ನಿಮಗೆಲ್ಲ ಗೊತ್ತಿದೆ. ಕ್ಷೇತ್ರದಲ್ಲಿದ್ದ ಮೂಲ ಸೌಲಭ್ಯ ಸಮಸ್ಯೆ ನೀಗಿಸುವಲ್ಲಿ ಶೇ.100 ರಷ್ಟು ಕೆಲಸಗಳನ್ನು ಮಾಡಿದ್ದೇನೆ. ಕುಡಿಯುವ ನೀರಿಗಾಗಿ ಕೊಡಗಳನ್ನು ಹೊತ್ತು ಮೈಲಿಗಳಷ್ಟು ದೂರ ಚಲಿಸುತ್ತಿದ ಗ್ರಾಮಗಳಿಗೆ ಈಗ ಸಾಕಷ್ಟು ನೀರು ಒದಗಿಸುವ ಕಾರ್ಯ ಮಾಡಿದ್ದೇನೆ. ರಸ್ತೆ ಚರಂಡಿ ಮೂಲ ಸೌಲಭ್ಯಗಳನ್ನು ಮೊದಲು ಒದಗಿಸುವ ಕೆಲಸ ಮಾಡಿದ್ದೇನೆ.
ಅದರಂತೆ ಮುಖ್ಯವಾಗ ಬೂದಿಹಾಳ-ಪೀರಾಪುರ ಏತ ನೀರಾವರಿ ಬಗ್ಗೆ ನಾನು ಧ್ವನಿ ಎತ್ತಿದಾಗ ಆಡಳಿತರೂಢ ಕಾಂಗ್ರೆಸ್ ಮುಖ್ಯಮಂತ್ರಿಗಳು ಇದನ್ನು ಮಾಡೇ ಮಾಡುತ್ತೇನೆ ಎಂದು ಅಬ್ಬರಿಸಿ ಹೋಗಿದ್ದರು. ಆದರೆ ಬಜೆಟ್ ಮಂಡನೆ ವೇಳೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಬಜೆಟ್ ಪುಸ್ತಕದಲ್ಲಿ ಯಾವುದೇ ಅನುದಾನ ಮೀಸಲಿರಸದೆ ಬರಿ ಬೂದಿಹಾಳ-ಪೀರಾಪುರ ಏತ ನೀರಾವರಿ ಎಂದು ಮಾತ್ರ ಹೆಸರು ನಮೂದಿಸಿದ್ದಾರೆ.
ಅದನ್ನೆ ಇಲ್ಲಿನವರು ಕಾಗದ ಕೈಯಲ್ಲಿಡುಕೊಂಡು ನಾ ಮಾಡಿದ್ದೇನೆ ನಾ ಮಾಡಿದ್ದೇನೆ ಎಂದು ಸುಳ್ಳು ಹೇಳುತ್ತಾ ತಿರುಗುತ್ತಿದ್ದಾರೆ ಎಂದು ಪರೋಕ್ಷವಾರಿ ಮಾಜಿ ಶಾಸಕ ದರ್ಶನಾಪುರ ಅವರನ್ನು ಲೇವಡಿ ಮಾಡಿದರು. ಹೌದು ನಿಮ್ಮ ಸರ್ಕಾರ ನೀವು ಕೆಲಸ ಮಾಡುವದಿದ್ದರೆ ಮಾಡಿ ಸ್ವಾಮಿ ಯಾರು ಬೇಡವೆಂದಿದ್ದಾರೆ ಕೆಂಭಾವಿಯನ್ನು ತಾಲೂಕನ್ನಾಗಿ ಮಾಡಬೇಕಿತ್ತು ನಿಮ್ಮ ಸರ್ಕಾರವಲ್ಲ ಮಾಡಿ ಏಕೆ ಮಾಡಲಿಲ್ಲ ಎಂದು ಮತ್ತೊಮ್ಮೆ ದರ್ಶನಾಪುರ ಅವರನ್ನು ಮತ್ತೊಮ್ಮೆ ತರಾಟೆಗೆ ತೆಗೆದುಕೊಂಡರು.
———————-