ಕೋವಿಡ್ ಸ್ಥಿತಿಯಲ್ಲಿ ಪಕ್ಷ ಉತ್ತಮ ಕಾರ್ಯನಿರ್ವಹಿಸುತ್ತಿದೆ- ಕಟೀಲ್
ಪಕ್ಷ ಸಂಘಟನೆ ಮತ್ತು ಕೋವಿಡ್ ಪರಿಸ್ಥಿತಿ, ಜಾಗೃತಿ ಕುರಿತು ಚರ್ಚೆ
yadgiri, ಶಹಾಪುರಃ ರಾಜ್ಯದಾದ್ಯಂತ ಪಕ್ಷದ ಸಂಘಟನೆ ಕುರಿತು ಪ್ರತಿ ಜಿಲ್ಲೆಯಲ್ಲಿ ಸಭೆಗಳನ್ನು ನಡೆಸುತ್ತಿದ್ದು, ಅದರಂಗವಾಗಿ ಈಗಾಗಲೇ ಹಲವಾರು ಜಿಲ್ಲೆಗಳಲ್ಲಿ ಸಭೆಗಳನ್ನು ನಡೆಸಿದ್ದೇನೆ. ಅದರ ಜೊತೆಗೆ ಕೊವಿಡ್ ಸ್ಥಿತಿಯಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ಸಲ್ಲಿಸುತ್ತಿರುವ ಸೇವೆ ಕುರಿತು ಮಾಹಿತಿ ಪಡೆಯಲಾಗುತ್ತಿದೆ. ಅಲ್ಲದೆ ಯಾವ ರೀತಿ ಕಾರ್ಯಕರ್ತರು ಸೇವೆ ಸಲ್ಲಿಸಬೇಕೆಂದು ಸಹ ತಿಳುವಳಿಕೆ ನೀಡಿ ಕೊವಿಡ್ ಪರಿಸ್ಥಿತಿಯಲ್ಲಿ ನಾಗರಿಕರಿಗೆ ನೆರವಾಗಲು ತಿಳಿಸಲಾಗಿದೆ ಎಂದು ಬಿಜೆಪಿ ರಾಜ್ಯಧ್ಯಕ್ಷ ನಳೀನಕುಮಾರ ಕಟೀಲ್ ಹೇಳಿದರು.
ನಗರದ ಮೋಟಗಿ ಸಭಾಂಗಣದಲ್ಲಿ ಬಿಜೆಪಿಯ ಜಿಲ್ಲಾ ಮಟ್ಟದ ಸಭೆಗೆ ಆಗಮಿಸಿದ್ದ ಅವರು, ಪತ್ರಕರ್ತರೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದರು. ನಮ್ಮ ಪಕ್ಷದ ಕಾರ್ಯಕರ್ತರು ಕೊವಿಡ್ ಸೋಂಕು ತಗುಲಿ ಮೃತಪಟ್ಟವರನ್ನು ಸಹ ಸಂಸ್ಕಾರ ಮಾಡಲು ಕೋವಿಡ್ ನಿಯಮನುಸಾರ ಭಾಗವಹಿಸಿ ನೆರವಿನ ಹಸ್ತ ನೀಡುತ್ತಿದ್ದಾರೆ ಎಂದರು.
ಪಕ್ಷದ ಸಿದ್ಧಾತದಂತೆ ಸಂಘಟನೆ ಕಾರ್ಯ ನಡೆಸಿಕೊಂಡು ಬರಲಾಗುತ್ತಿದೆ. ಸದ್ಯ ಪಂಚಾಯತ ಚುನಾವಣೆ ಬರುತ್ತಿರುವದರಿಂದ ಅದರಲ್ಲಿ ಕೋವಿಡ್ ನಿಯಮನುಸಾರ 30ರಿಂದ 40 ಜನ ಮಾತ್ರ ಭಾಗವಹಿಸಬೇಕಾಗುತ್ತದೆ. ಆ ಹಿನ್ನೆಲೆಯಲ್ಲಿ ಪಂಚಾಯತ್ ಚುನಾವಣೆ ಹೇಗೆ ಎದುರಿಸಬೇಕೆಂದು ನಮ್ಮಲ್ಲಿ ಚರ್ಚಿಸಿ ಅದಕ್ಕೊಂದು ರೂಪರೇಷೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ ಪಕ್ಷದ ಪ್ರಮುಖರು ಹಾಗೂ ಪದಾಧಿಕಾರಿಗಳ ಸಭೆ ಇದಾಗಿದೆ.
ಮತ್ತು ಪಕ್ಷ ಸಂಘಟನೆಯಲ್ಲಿ ಪರಮುಖವಾಗಿ ಪ್ರತಿ ವಾರ್ಡಿಗೊಬ್ಬರಂತೆ ಪೇಜ್ ಪ್ರಮುಖರನ್ನಾಗಿ ನೇಮಿಸಲಾಗಿದೆ. ಆ ಮೂಲಕ ಜನಸೇವೆಗೆ ಕಾರ್ಯಕರ್ತರನ್ನು ತೊಡಗಿಸಿಕೊಳ್ಳಲು ಸೂಚಿಸಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ, ಸಂಸದ ರಾಜಾ ಅಮರೀಶ್ವರ ನಾಯಕ. ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ, ಯಾದಗಿರಿ ಜಿಲ್ಲಾಧ್ಯಕ್ಷ ಡಾ.ಶರಣಭೂಪಾಲರಡ್ಡಿ, ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ, ಮಾಜಿ ಸಚಿವ ಬಾಬುರಾವ್ ಚಿಂಚನಸೂರ, ಶಾಸಕ ರಾಜಕುಮಾರ ತೇಲ್ಕರ್ ಸೇರಿದಂತೆ ಇತರರು ಇದ್ದರು.