ಶಿವಸೇನೆ-ಬಿಜೆಪಿ ಭಾಯಿ ಭಾಯೀ… ಬಿಜೆಪಿ ಚಾಣಕ್ಯ ಅಮಿತ್ ಶಾ ತಂತ್ರ ಸಫಲ!
ದೆಹಲಿ: ಎನ್ ಡಿ ಎ ಮಿತ್ರಪಕ್ಷಗಳು ಒಂದೊಂದಾಗಿಯೇ ಮೈತ್ರಿಕೂಟವನ್ನು ತೊರೆಯುತ್ತಿವೆ. ತೃತೀಯ ರಂಗದ ಮೂಲಕ ವಿವಿಧ ಪಕ್ಷಗಳು ಒಂದಾಗುತ್ತಿವೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿದ ಬಿಜೆಪಿ ಚಾಣಕ್ಯ ಅಮಿತ್ ಶಾ ಎನ್ ಡಿ ಎ ಮೈತ್ರಿಕೂಟದ ಹಳೇದೋಸ್ತಿಯನ್ನು ಗಟ್ಟಿಗೊಳಿಸುವ ಪ್ಲಾನ್ ರೂಪಿಸಿದ್ದಾರೆ.
ಇಂದು ಮುಂಬೈನಲ್ಲಿ ಶಿವಸೇನೆ ಮುಖ್ಸಸ್ಥ ಉದ್ಭವ ಠಾಕ್ರೆ ನಿವಾಸಕ್ಕೆ ಭೇಟಿ ನೀಡಿದ ಅಮಿತ್ ಶಾ ಭಿನ್ನಮತ ತಣಿಸುವ ಪ್ರಯತ್ನ ಮಾಡಿದ್ದಾರೆ. 2019ರ ಚುನಾವಣೆಯಲ್ಲಿ ಕೇಸರಿ ಪಕ್ಷಗಳು ಒಂದಾಗಿ ನಡೆಯಬೇಕಾದ ಅನಿವಾರ್ಯತೆ ಬಗ್ಗೆ ಮನದಟ್ಟು ಮಾಡಿದ್ದಾರೆ ಎನ್ನಲಾಗಿದೆ. ಬಳಿಕ ಚಂಡಿಘಡ್ ಗೆ ಪ್ರಯಾಣ ಬೆಳೆಸಿದ್ದು ಅಕಾಲಿ ದಳದ ಮುಖ್ಯಸ್ಥ ಪ್ರಕಾಶ್ ಸಿಂಗ್ ಬಾದಲ್ ಜೊತೆಗೂ ಮಾತುಕತೆ ನಡೆಸಲಿದ್ದಾರೆ.
ಇನ್ನು ಜೂನ್ 7ರಂದು ಪಾಟ್ನಾದಲ್ಲಿ ಎನ್ ಡಿ ಮಿತ್ರ ಪಕ್ಷಗಳ ನಾಯಕರ ಜೊತೆ ಮಹಾಭೋಜನ ಆಯೋಜಿಸಲಾಗಿದೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಕೇಂದ್ರ ಸಚಿವ ಪಾಸ್ವಾನ್ ಸೇರಿದಂತೆ ವಿವಿಧ ಪಕ್ಷಗಳ ಮುಖ್ಯಸ್ಥರು ಎನ್ ಡಿಎನ ಎಲ್ಲಾ ಸಂಸದರನ್ನೂ ಮಹಾಭೋಜನಕ್ಕೆ ಆಹ್ವಾನ ನೀಡಲಾಗಿದೆ ಎನ್ನಲಾಗಿದೆ. ಆ ಮೂಲಕ ಬಿಜೆಪಿ ಚಾಣಕ್ಯ ಅಮಿತ್ ಶಾ 2019ರ ಚುನಾವಣೆಗೆ ಭರದ ತಯ್ಯಾರಿ ಆರಂಭಿಸಿದ್ದಾರೆ.