ಪ್ರಮುಖ ಸುದ್ದಿ

ಸೆಲ್ಫಿಗೀಳಲಿ ಜೀವ ಹೋದೀತು ಹುಷಾರ್..ರ್ರೀ..

ನಾರಾಯಣಪುರ ಡ್ಯಾಂ ನೋಡಲು ಮುಗಿಬಿದ್ದ ಜನ-ಸೂಕ್ತ ಭದ್ರತೆ ಅಗತ್ಯ

ನೀರ ಸೊಬಗಿನೊಂದಿಗೆ ಸೆಲ್ಫೀಗಾಗಿ ಮುಗಿ ಬಿದ್ದ ಜನ..

ನಾರಾಯಣಪುರಃ ಇಲ್ಲಿನ ಬಸವ ಸಾಗರ ಜಲಾಶಯದಿಂದ ಎಲ್ಲಾ ಗೇಟ್ ಮೂಲಕ ಹರಿ ಬಿಟ್ಟ ನೀರಿನ ಸೊಬಗು ನೋಡಲು ಜನಸ್ತೋಮವೇ ಸೇರುತ್ತಿದೆ.

ಅದರೊಂದಿಗೆ ಧುಮ್ಮಿಕ್ಕುವ ನೀರಿನ ಸೊಬಗಿನ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಜನ ಮುಗಿ ಬೀಳುತ್ತಿದ್ದಾರೆ.
ಈ ಸಂದರ್ಭ ನಾಗರಿಕರು ಎಚ್ಚರಿಕೆವಹಿಸಬೇಕು. ಸೆಲ್ಫಿ ತೆಗೆದುಕೊಳ್ಳುವ ಗಡಿಬಿಡಿಯಲ್ಲಿ ಅನಾಹುತ ಸಂಭವಿಸದಂತೆ ಎಚ್ಚರಿಕೆವಹಿಸಬೇಕು.

ಅಲ್ಲದೆ ಜಲಾಶಯದ ವೀಕ್ಷಣೆಗೆ ಸಾಕಷ್ಟು ಸಂಖ್ಯೆಯಲ್ಲಿ ಜನರು ಬರುತ್ತಿದ್ದು, ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಇಲ್ಲಿ ಕಾಣದಿರುವದು ದುರಂತ. ಕೂಡಲೇ ಜಿಲ್ಲಾಡಳಿತ ನಾರಾಯಣಪುರ ಬಸವ ಸಾಗರ ಜಲಾಶಯಕ್ಕೆ ಸೂಕ್ತ ಭದ್ರತೆ ವ್ಯವಸ್ಥೆ ಕಲ್ಪಿಸಬೇಕಿದೆ. ವೀಕ್ಷಣೆಗೆ ಬರುವ ನಾಗರಿಕರ ಸೆಲ್ಫಿ ಹುಚ್ಚಿಗೆ ಮೊದಲು ಬ್ರೇಕ್ ಹಾಕಬೇಕು. ಸೂಕ್ತ ಪೊಲೀಸ್ ಗಾವಲು ಅತ್ಯಗತ್ಯ. ಜಿಲ್ಲಾಡಳಿತ ಕೂಡಲೇ ಕ್ರಮಕ್ಕೆ ಮುಂದಾಗಲಿ ಎಂಬುದು ಈ ವರದಿಯ ಆಶಯ.

Related Articles

Leave a Reply

Your email address will not be published. Required fields are marked *

Back to top button