ಪ್ರಮುಖ ಸುದ್ದಿ
ಮಾಜಿ ಸಿಎಂ ಯಡಿಯೂರಪ್ಪ ಹೇಳಿಕೆಗೆ ಬಿ.ಆರ್.ಪಾಟೀಲ್ ತಿರುಗೇಟು
ಕಲಬುರ್ಗಿಯಲ್ಲಿ ಬಿ.ಆರ್.ಪಾಟೀಲ್ ಹೇಳಿಕೆ
ಕಲಬುರ್ಗಿಃ ಬಿ.ಆರ್.ಪಾಟೀಲ್ ಕೆಜೆಪಿಯಿಂದ ಗೆದ್ದು ಬಂದಿದ್ದ ಶಾಸಕ, ಈಗ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಅವರೊಬ್ಬ ನಂಬಿಕೆಗೆ ಅರ್ಹವಲ್ಲದ ವ್ಯಕ್ತಿ ಎಂದು ಮಾಜಿ ಸಿಎಂ ಯಡಿಯೂರಪ್ಪ ನೀಡಿದ ಈ ಹೇಳಿಕೆಗೆ ತಿರುಗೇಟು ನೀಡಿದ ಶಾಸಕ ಬಿ.ಆರ್.ಪಾಟೀಲ್ ಮರಳಿ ಬಿಜೆಪಿಗೆ ಹೋಗುವುದಿಲ್ಲ ಎಂದು ಹೇಳಿ ಆಗ ಚುನಾವಣೆಯಲ್ಲಿ ನಮ್ಮೆಲ್ಲರನ್ನು ಮರಳು ಮಾಡಿದ್ದ ಅಷ್ಟೆ ಅಲ್ಲದೆ ಬಿಜೆಪಿಗೆ ಮರಳುವದಿಲ್ಲವೆಂದು ರಕ್ತದಲ್ಲಿ ಬರೆದುಕೊಡುತ್ತೇನೆ ಎಂದಿದ್ದ ಬಿ.ಎಸ್.ವೈ ಮತ್ತೆ ಬಿಜೆಪಿಗೆ ಸೇರಿದ್ದು ನಮಗೆ ಮಾಡಿದ ದ್ರೋಹವಲ್ಲವೇ.? ನನ್ನನ್ನು ಜೈಲಿಗೆ ಕಳುಹಿಸಿದ್ದೇ ಬಿಜೆಪಿ ಎಂದಿದ್ದ ಅವರು ಮತ್ತೇಕೆ ಜೈಲು ಸೇರಿಕೊಂಡಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ.
ಯಡಿಯೂರಪ್ಪ ಪಾಲಿಗೆ ಬಿಜೆಪಿ ಒಂದು ಓಪನ್ ಜೈಲ್ ಇದ್ದಂತೆ. ಹೊಟ್ಟೆ ಉರಿಯಿಂದ ಬಿಎಸ್ವೈ ನನ್ನ ವಿರುದ್ಧ ಮಾತನಾಡುತ್ತಿದ್ದಾರೆ. ನಾಣು ಅವರ ಜೊತೆ ಬಿಜೆಪಿಗೆ ಹೋಗದ ಕಾರಣ ಆ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದಿದ್ದಾರೆ.




