ಪ್ರಮುಖ ಸುದ್ದಿ
ರಕ್ತ ಚಂದ್ರಗ್ರಹಣದ ಸಮಯ ಯಡಿಯೂರಪ್ಪ ನಿವಾಸದಲ್ಲಿ ಯಗ್ನ ಯಾಗ!?
ಬೆಂಗಳೂರು: ನಾಳೆ ರಕ್ತ ಚಂದ್ರಗ್ರಹಣ ಹಿನ್ನೆಲೆಯಲ್ಲಿ ನಾಡಿನೆಲ್ಲೆಡೆ ವಿಶೇಷ ಪೂಜೆ ಪ್ರಾರ್ಥನೆಗಳು ನಡೆಯಲಿವೆ. ಬಹುತೇಕ ದೇಗುಲಗಳಲ್ಲಿ ಗ್ರಹಣದ ಸಮಯ ದೇವರ ದರ್ಶನವನ್ನು ನಿಷಿದ್ಧಗೊಳಿಸಲಾಗಿದೆ. ನಾಳಿನ ರಕ್ತ ಚಂದ್ರ ಗ್ರಹಣ ಭಾರೀ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಕುತೂಹಲದ ಜೊತೆಗೆ ಆತಂಕವನ್ನೂ ಮೂಡಿಸಿದೆ.
ಇದೇ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯದ್ಯಕ್ಷ ಬಿ.ಎಸ್.ಯಡಿಯೂರಪ್ಪ ತಮ್ಮ ನಿವಾಸದಲ್ಲಿ ವಿಶಿಷ್ಟ ಯಗ್ನ , ಯಾಗ ಆಯೋಜಿಸಿದ್ದಾರೆ. ಕೇರಳ ಮೂಲದ ಪುರೋಹಿತರಿಂದ ಚಂಡಿಕಾ ಹೋಮ ನಡೆಸಿಲಿದ್ದಾರೆ. ಯಾಗದ ಮೂಲಕ ಬಿಎಸ್ ವೈ ಶತೃ ಸಂಹಾರದ ಮೊರೆ ಹೋಗಿದ್ದಾರೆ ಎನ್ನಲಾಗಿದೆ. ಹೀಗಾಗಿ, ಬಿ.ಎಸ್.ಯಡಿಯೂರಪ್ಪ ಅವರು ನಾಳೆ ಇಡೀ ದಿನ ಪೂಜೆ, ಪುನಸ್ಕಾರದಲ್ಲಿ ಫುಲ್ ಬಿಜಿ ಇರಲಿದ್ದಾರೆ ಎಂದು ತಿಳಿದು ಬಂದಿದೆ.