ಕಲಬುರ್ಗಿಃ ಮತ್ತೆ ನಾಲ್ವರ ರಕ್ತ, ಕಫ ಪರೀಕ್ಷೆಗೆ ರವಾನೆ- ಎಲ್ಲೆಡೆ ಕಟ್ಟೆಚ್ಚರ
ಕಲಬುರ್ಗಿಃ ಮೃತ ಕೊರೊನಾ ಸೋಂಕಿತನ ಬಡಾವಣೆ ಬಫರ್ ಝೋನ್
ಕಲಬುರ್ಗಿಃ ಜಿಲ್ಲೆಯಲ್ಲಿ ಕೊರೊನಾ ರೊಗ ತಡೆಗೆ ಕಟ್ಟೆಚ್ಚರ ವಹಿಸಲಾಗುತಿದ್ದು, ಕೊರೊನಾ ಲಕ್ಷಣ ಕಂಡು ಬಂದ ಮತ್ತೆ ನಾಲ್ವರ ರಕ್ತ ಮತ್ತು ಕಫ ಪರೀಕ್ಷೆಗೆ ರವಾನಿಸಲಾಗಿದೆ. ನಾಳೆ ವರದಿ ಬರಲಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ.ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಸೋಂಕಿನಿಂದ ಈಚೆಗೆ ಮೃತಪಟ್ಟ ವ್ಯಕ್ತಿಯ ನೇರ ಸಂಪರ್ಕ ದಲ್ಲಿದ್ದ ಮತ್ತಿಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ.
ಅಲ್ಲದೆ ಬೇರೆ ಬೇರೆ ದೇಶಗಳಿಂದ ಜಿಲ್ಲೆಗೆ ಬಂದ 61 ಜನರು ಬಂದಿರುವ ಮಾಹಿತಿ ಲಭ್ಯವಾಗಿದೆ. ಇದರಲ್ಲಿ ಒಬ್ಬರಿಗೆ ಕೊರೊನಾ ಲಕ್ಷಣ ಪತ್ತೆಯಾಗಿದ್ದು, ಮಾದರಿ ಪರೀಕ್ಷೆಕೈಗೊಳ್ಳಲಾಗಿದೆ. ನಗರ ಇಎಸ್ ಐನಲ್ಲಿ 8 ಜನರನ್ನು ನಿಗಾಘಟಕದಲ್ಲಿಡಲಾಗಿದೆ.
ಸೊಂಕಿನಿಂದ ಮೃತಪಟ್ಟ ವ್ಯಕ್ತಿಯ ಸಂಪರ್ಕದಲ್ಲಿರುವ 370 ಜನರನ್ನು ಅವರನೆಯಲ್ಲಿಯೇ ನಿಗಾಹಿಸಲು ಸೂಚಿಸಲಾಗಿದೆ. ಆರೋಗ್ಯ ತಂಡ ಇವರನ್ನು ನಿಭಾಯಿಸುತ್ತಿದೆ ಎಂದರು.
ಬಡಾವಣೆಯೇ ಬಫರ್ ಝೋನ್ಃ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದ ಬಡಾವಣೆಯನ್ನು ಬಫರ್ ಝೋನ್ ಎಂದು ಗುರುತಿಸಲಾಗಿದ್ದು, ಆ ಬಡಾವಣೆ ವ್ಯಾಪ್ತಿಯಲ್ಲಿ ಜನರ ಆತಂಕ ಕಡಿಮೆ ಮಾಡಲು ಮುನ್ನೆಚ್ವರಿಕೆ ಕ್ರಮವಾಗಿ 50 ಆರೋಗ್ಯ ತಂಡಗಳನ್ನು ರಚಿಸಿ ಸರ್ವೆ ಮಾಡಲಾಗುತ್ತಿದೆ.
ಇಲ್ಲಿವರೆಗೆ 3000 ಸಾವಿರ ಮನೆಗಳನ್ನು ಸರ್ವೆ ಮಾಡಲಾಗಿದ್ದು, ಯಾವುದೇ ರೊಗದ ಗುಣಲಕ್ಷಣಗಳು ಕಂಡು ಬಂದಿರುವದಿಲ್ಲ ಎಂದು ಜಿಲ್ಲಾಧಿಕಾರಿ ಶರತ್ ಬಿ. ಸ್ಪಷ್ಟ ಪಡಿಸಿದ್ದಾರೆ.