ಬೀರನೂರಲ್ಲಿ ಜು.21 ರಂದು ಚಿನ್ಮಯ ಜ್ಞಾನಾಶ್ರಮ ಲೋಕಾರ್ಪಣೆ
ನಾಳೆ ಚಿನ್ಮಯ ಜ್ಞಾನಾಶ್ರಮ, ಗ್ರಂಥಗಳ ಲೋಕಾರ್ಪಣೆ ಕಾರ್ಯಕ್ರಮ
ನಾಳೆ ಚಿನ್ಮಯ ಜ್ಞಾನಾಶ್ರಮ, ಗ್ರಂಥಗಳ ಲೋಕಾರ್ಪಣೆ ಕಾರ್ಯಕ್ರಮ
ಬೀರನೂರಲ್ಲಿ ಜು.21 ರಂದು ಚಿನ್ಮಯ ಜ್ಞಾನಾಶ್ರಮ ಲೋಕಾರ್ಪಣೆ
yadgiri, ಶಹಾಪುರಃ ತಾಲೂಕಿನ ಬೀರನೂರ ಗ್ರಾಮದಲ್ಲಿ ರವಿವಾರ ಜುಲೈ 21 ರಂದು ಬೆಳಗ್ಗೆ 9 ಗಂಟೆಗೆ ಚಿನ್ಮಯ ಜ್ಞಾನಾಶ್ರಮ ಮತ್ತು ಮೂರು ಗ್ರಂಥಗಳು ಲೋಕಾರ್ಪಣೆ ಕಾರ್ಯಕ್ರಮ ಜರುಗಲಿದ್ದು, ಉದ್ಘಾಟಕರಾಗಿ ಸಣ್ಣ ಕೈಗಾರಿಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಆಗಮಿಸಲಿದ್ದು, ದಿವ್ಯ ಸಾನಿಧ್ಯವನ್ನಯ ಅಡವಿಲಿಂಗ ಮಹಾರಾಜರುವಹಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಿನ್ಮಯ ಜ್ಞಾನಾಶ್ರಮದ ಪ್ರಭು ನಿತ್ಯಾನಂದರುವಹಿಸಲಿದ್ದು, ಆಶ್ರಮದ ಸದ್ಭಕ್ತರು ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಆಶ್ರಮದ ಸದ್ಭಕ್ತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ,
ಅಲ್ಲದೆ ಕಾರ್ಯಕ್ರಮದಲ್ಲಿ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ, ದೇವರಹಿಪ್ಪರಿಗಿ ಮಾಜಿ ಶಾಸಕ ಸೋಮನಗೌಡ ಪಾಟೀಲ್ ಸಾಸನೂರ ಸೇರಿದಂತೆ ನಫೆಡ್ ನವದೆಹಲಿ ನಿರ್ದೇಶಕ ಗುರುನಾಥರಡ್ಡಿ ಪೋ.ಪಾಟೀಲ್ ಹಳಿಸಗರ, ಮುಖಂಡರಾದ ಸುರೇಶ ಸಜ್ಜನ್, ಅಪ್ಪು ದೇಸಾಯಿ ಕಲಿಕೇರಿ ಮತ್ತು ಯಾದಗಿರಿ ಕಸಾಪ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ಇತರರು ಮುಖ್ಯ ಅಥಿತಿಗಳಾಗಿ ಆಗಮಿಸಲಿದ್ದಾರೆ ಎಂದು ಮಂಡಳಿ ತಿಳಿಸಿದೆ.