ಪ್ರಮುಖ ಸುದ್ದಿ
ಲೇಖಾನುದಾನ, ಧನವಿನಿಯೋಗ ವಿಧೇಯಕ ಪಾಸ್!
ಬೆಂಗಳೂರು: ಮುಂದಿನ ಮೂರು ತಿಂಗಳ ಅಂಗೀಕಾರವಾದ ಲೇಖಾನುದಾನ, ಧನವಿನಿಯೋಗ ವಿಧೇಯಕ ಅಂಗೀಕಾರ. ಮಾಜಿ ಸಿಎಂ ಸಿದ್ಧರಾಮಯ್ಯ ಮೊದಲಿಗೆ ಈ ಬಗ್ಗೆ ವಿರೋಧ ವ್ಯಕ್ತಪಡಿಸಿದರು. ಚರ್ಚಿಸುವುದೇ ಅಂಗೀಕರಿಸುವುದು ಒಳ್ಳೆಯದಲ್ಲ. ಬಳಿಕ ಸದನ ಕರೆದು ಚರ್ಚಿಸುವಂತೆ ಹೇಳಿದರು.
ಅಭಿವೃದ್ಧಿಗಾಗಿ ಹಿಂದಿನ ಸರ್ಕಾರ ರೂಪಿಸಿದ್ದನ್ನೇ ನಾವು ಅಂಗೀಕರಿಸುವಂತೆ ಮನವಿ ಮಾಡುತ್ತೇವೆ ಎಂದು ಯಡಿಯೂರಪ್ಪ ಹೇಳಿದರು. ಜೆಡಿಎಸ್ ನ ಜಿ.ಟಿ.ದೇವೇಗೌಡರು ಸಹ ಯಡಿಯೂರಪ್ಪ ಬೆಂಬಲಿಸಿ ಮಾತನಾಡಿದರು. ಕೊನೆಗೆ ಸ್ಪೀಕರ್ ಲೇಖಾನುದಾನ, ಧನ ವಿನಿಯೋಗ ವಿಧೇಯಕ ನಿರ್ಣಯ ಮಂಡಿಸಲುಸೂಚಿಸಿದರು. ಎರಡೂ ವಿಧೇಯಕಗಳು ಪಾಸ್ ಮಾಡಲಾಯಿತು.