ಪ್ರಮುಖ ಸುದ್ದಿ

ಮೋದಿ ‘ಮರ್ಯಾದೆ ಉಳಿಸಿ’ ಅಂದದ್ದು ಕೆಲಸ ಮಾಡಿದೆ -ಸಿಎಂ ಸಿದ್ಧರಾಮಯ್ಯ

ಯಾದಗಿರಿ: ‘ಇದು ನನ್ನ ರಾಜ್ಯ, ಬಿಜೆಪಿಗೆ ಬೆಂಬಲಿಸಿ ನನ್ನ ಮರ್ಯಾದೆ ಉಳಿಸಿ’ ಎಂದು ಪ್ರಧಾನಿ ಮೋದಿ ಹೋದಲ್ಲೆಲ್ಲ ಹೇಳಿದ್ದು ಕೆಲಸ ಮಾಡಿದೆ. ಪರಿಣಾಮ ಗುಜರಾತಿಗಳು ಬಿಜೆಪಿಗೆ ಬೆಂಬಲಿಸಿದ್ದಾರೆ. ಆದರೂ ಪ್ರಧಾನಿ ಮೋದಿಯ ತವರಲ್ಲಿ ಬಿಜೆಪಿಗೇನು ಭಾರೀ ಬಹುಮತ ಬಂದಿಲ್ಲ. ಕಳೆದ ಬಾರಿಗಿಂತ ಕಾಂಗ್ರೆಸ್ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಿದ್ದು ನಾವು ಗೆದ್ದೂ ಸೋತಂತಾಗಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.

ನರೇಂದ್ರ ಮೋದಿ, ಅಮಿತ್ ಶಾ ಗುಜರಾತಿನವರು. ಅವರಿಗೆ ಅಧಿಕಾರವಿದೆ, ಹಣ ಬಲವಿದೆ. ವ್ಯವಸ್ಥಿತ ಹಿಂದುತ್ವದ ಭಾಷಣ ಮಾಡುತ್ತಾ ಬಂದಿದ್ದಾರೆ. ಆಡಳಿತ ವಿರೋಧಿ ಅಲೆಯ ಮದ್ಯೆಯೂ ಬಿಜೆಪಿಗೆ ಬಹುಮತ ಬಂದಿದೆ ಅಂದರೆ ಇವಿಎಂ ಮಷೀನ್ ಮೇಲಿರುವ ಸಂಶಯಕ್ಕೆ ಪುಷ್ಠಿ ನೀಡುತ್ತದೆ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಇಡಿ, ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆಯನ್ನು ಚೆನ್ನಾಗಿ ಬಳಸಿಕೊಂಡಿದೆ. ಗುಜರಾತಿನ ಶಂಕರ್ ವಘೇಲಾ ಅಂತವರು ಪಕ್ಷ ತೊರೆದದ್ದೂ ಪರಿಣಾಮ ಬೀರಿದೆ. ಜೊತೆಗೆ ಗುಜರಾತಿನಲ್ಲಿ ನಮ್ಮ ಪಕ್ಷದ ನೆಟವರ್ಕ್ ಪ್ರಭಲವಾಗಿಲ್ಲ. ಆದರೆ, ಕರ್ನಾಟಕದಲ್ಲಿ ಮೋದಿ, ಅಮಿತ್ ಶಾ ತಂತ್ರಗಾರಿಕೆ ನಡೆಯೋದಿಲ್ಲ. ಪರಿಣಾಮ ನಿನ್ನೆಯಷ್ಟೇ ಬೆಂಗಳೂರಿನಲ್ಲಿ ರಾಜನಾಥ್ ಸಿಂಗ್ ಕಾರ್ಯಕ್ರಮಕ್ಕೆ ಜನರೇ ಇರಲಿಲ್ಲ. ಹೀಗಾಗಿ, ಇದು ಶರಣರು ನಾಡು ಇಲ್ಲಿ ಕೋಮುವಾದ ನಡೆಯೋದಿಲ್ಲ ಎಂದು ಸಿಎಂ ಹೇಳಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button