ಪ್ರಮುಖ ಸುದ್ದಿ
ಕಾಫಿ ದೊರೆ ಸಿದ್ಧಾರ್ಥ ದುರಂತ ಅಂತ್ಯ ಹಿನ್ನೆಲೆ ಕಾಫಿ ಉದ್ಯಮ ಬಂದ್!
ಬೆಂಗಳೂರು : ವಿಶ್ವಕ್ಕೆ ಕಾಫಿ ಪರಿಚಯಿಸಿದ ಕಾಫಿ ಕಿಂಗ್ ಸಿದ್ಧಾರ್ಥ ದುರಂತ ಅಂತ್ಯ ಹಿನ್ನೆಲೆಯಲ್ಲಿ ಇಂದು ರಾಜ್ಯದಾದ್ಯಂತ ಕಾಫಿ ಉದ್ಯಮ ಸ್ಥಗಿತಗೊಳಿಸಲು ಕಾಫಿ ಬೆಳೆಗಾರರ ಒಕ್ಕೂಟ ನಿರ್ಧರಿಸಿದೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಕಾಫಿ ಬೆಳೆಗಾರರ ಒಕ್ಕೂಟದ ಅದ್ಯಕ್ಷ ತೀರ್ಥಮಲ್ಲೇಶ್ ಕಾಫಿ ತೋಟ, ಕಾಫಿ ಕ್ಯೂರಿಂಗ್ ಹಾಗೂ ಕಾಫಿ ಸಂಬಂಧಿತ ಉದ್ಯಮ ಇಂದು ಬಂದ್ ಮಾಡಲು ನಿರ್ಧರಿಸಿದ್ದೇವೆ ಎಂದಿದ್ದಾರೆ.
ಕಾಫಿಗೆ ಬಂಗಾರದ ಬೆಲೆ ತಂದು ಕೊಟ್ಟ ಉದ್ಯಮಿ ಸಿದ್ದಾರ್ಥ ಸೋಮವಾರ ಸಂಜೆಯಿಂದ ನಾಪತ್ತೆ ಆಗಿದ್ದರು. ಆ ಕ್ಷಣದಿಂದಲೇ ಕಾಫಿ ಉದ್ಯಮ ಸಂಬಂಧಿತ ಜನರಲ್ಲಿ ಆತಂಕ ಮನೆ ಮಾಡಿದ್ದು ಸಿದ್ಧಾರ್ಥ ಶವಪತ್ತೆ ಸುದ್ದಿ ಹೊರಬೀಳುತ್ತಿದ್ದಂತೆ ಕಾಫಿ ಉದ್ಯಮದಲ್ಲಿ ದುಖ: ಮಡುಗಟ್ಟಿತ್ತು. ಇಂದು ಕಾಫಿ ಸಂಬಂಧಿತ ಉದ್ಯಮ ಬಂದ್ ಮಾಡುವ ಮೂಲಕ ಸಂತಾಪ ಸೂಚಿಸಲಾಗುತ್ತಿದೆ.