ಕೊರೊನಾ ರೂಪಾಂತರ ಪ್ರಭೇದ ಪತ್ತೆಃ ಮುಂಜಾಗೃತ ಅಗತ್ಯ - ಡಾ.ಸುಧಾಕರ
ಲಾಕ್ ಡೌನ್ ಮಾಡುವ ಸ್ಥಿತಿ ಇಲ್ಲ ಆದರೆ ನಿರ್ಲಕ್ಷ ಸಲ್ಲದು – ಡಾ.ಸುಧಾಕರ
ಕೊರೊನಾ ರೂಪಾಂತರ ಪ್ರಭೇದ ಪತ್ತೆಃ ಮುಂಜಾಗೃತ ಅಗತ್ಯ - ಡಾ.ಸುಧಾಕರ
ಬೆಂಗಳೂರಃ ಇಂಗ್ಲೆಂಡ್ ನಲ್ಲಿ ಕೊರೊನಾ ರೂಪಾಂತರಗೊಂಡಿದ್ದು ಹೊಸ ಪ್ರಭೇದ ಪತ್ತೆಯಾಗಿದೆ. ಆ ಹಿನ್ನೆಲೆ ರಾಜ್ಯದಲ್ಲೂ ಸಾಕಷ್ಟು ಆತಂಕ ಎದುರಾಗಿದ್ದು, ಮುಂಜಾಗೃತವಾಗಿ ಕ್ರಮಗಳನ್ನು ಕೈಗೊಳ್ಳಬೇಕಿದೆ.
ಹಾಗಂತ ಯಾರೊಬ್ಬರು ಭಯ ಪಡುವ ಅಗತ್ಯವಿಲ್ಲ. ಆದರೆ ನಿರ್ಲಕ್ಷ್ಯ ಬೇಡ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ವೈರಸ್ ಹೊಸ ರೂಪಾಂತರ ಪಡೆದು ಬಂದಿದ್ದು ಬ್ರಿಟನ್ ನಲ್ಲಿ ಈಗಾಗಲೇ ಕೊರೊನಾ ಹೊಸ ರೂಪಾಂತರ ಪತ್ತೆ ಮಾಡಲಾಗಿದೆ.
ಹೀಗಾಗಿ ಯುಕೆಯಿಂದ ಭಾರತಕ್ಕೆ ಬರುವ. ಎಲ್ಲಾ ವಿಮಾನಗಳನ್ನು ಡಿಸೆಂಬರ್ 31 ರವರೆಗೂ ರದ್ದುನಪಡಿಸಲಾಗಿದೆ. ಅಲ್ಲದೆ ಈಗಾಗಲೇ ಭಾರತಕ್ಕೆ 138 ಮಂದಿ ಪ್ರಯಾಣಿಕರು ಬಂದಿದ್ದು, ಅವರೆಲ್ಲರೂ ಕಡ್ಡಾಯವಾಗಿ ಕ್ವಾರಂಟೈನ್ ಗೆ ಒಳಗಾಗಬೇಕಿದೆ.
ಹೊಸ ವೈರಾಣು ಕೊರೊನಾಗಿಂತ ತೀವ್ರತೆ ಹೆಚ್ಚಿದ್ದು, ನಾಗರಿಕರು ಎಚ್ಚರಿಕೆವಹಿಸುವ ಅಗತ್ಯವಿದೆ. ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯ ನಿರ್ಲಕ್ಷ ಸಲ್ಲದು ಎಂದು ಅವರು ತಿಳಿಸಿದ್ದಾರೆ.