ಆಪರೇಷನ್ ಕಮಲದಡಿ ನನ್ನ ಸೆಳೆಯೋ ಧೈರ್ಯ ಬಿಜೆಪಿ ನಾಯಕರಿಗಿಲ್ಲ-ದರ್ಶನಾಪುರ
ಕಾಂಗ್ರೆಸ್ ಬಿಟ್ಟು ಹೋಗೋರು ಹೋಗಲಿ, ಪಕ್ಷಕ್ಕೆ ಯಾರು ಅನಿವಾರ್ಯ ಅಲ್ಲ- ದರ್ಶನಾಪುರ
ಯಾದಗಿರಿ: ಮೈತ್ರಿ ಸರಕಾರ ಬೀಳುತ್ತದೆ ಬಿಜೆಪಿ ಸರಕಾರ ರಚನೆಯಾಗುತ್ತದೆ ಎಂದು ಬಿಜೆಪಿ ನಾಯಕರ ಮಾತು ಕೇಳಿ ಕೇಳಿ ಸಾಕಾಗಿದೆ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.
ನಗರಸಭೆ ಚುನಾವಣೆ ಹಿನ್ನೆಲೆ ಪಟ್ಟಣದಲ್ಲಿ ವಿವಿಧ ವಾರ್ಡ್ ಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡುವ ಸಂದರ್ಭ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,
ಬಿಜೆಪಿ 105 ಶಾಸಕರನ್ನು ಇಟ್ಟುಕೊಂಡು ಸರಕಾರ ಬದಲಾವಣೆ ಮಾಡಲು ಸಾಧ್ಯನಾ.? ಸರಕಾರ ಮಾಡಬೇಕಾದರೆ ವಾಮ ಮಾರ್ಗ ಹಿಡಿದು ದುಡ್ಡಿನ ಮದ ತೋರಿಸಿ ಎದುರು ಪಕ್ಷದ ಶಾಸಕರನ್ನು ರಾಜೀನಾಮೆ ಕೊಡಿಸಿ ಸರ್ಕಾರ ರಚನೆ ಮಾಡೋದು ಸರಿಯಲ್ಲ ಎಂದು ಜರಿದರು.
ಬಿಜೆಪಿಗೆ 105 ಸ್ಥಾನ ನೀಡಿದ್ದು, ಬಹುಮತ ನೀಡಿಲ್ಲ. ಜನರ ತೀರ್ಪಿನಂತೆ ಬಿಜೆಪಿ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಲಿ,
ಅದು ಬಿಟ್ಟು ಒಬ್ಬ ಶಾಸಕರಿಗೆ 30 ರಿಂದ 50 ಕೋಟಿ ಹಣದ ಆಮಿಷವೊಡ್ಡುವ ಕೆಲಸ ಬಿಜೆಪಿ ಮಾಡುತ್ತಿದೆ ಎಂದು ಆರೋಪಿಸಿದರು.
ನಿಮಗೂ ಆಪರೇಷನ್ ಕಮಲ ಬಲೆ ಬೀಸಲಾಗಿದೆ ಎಂಬ ಮಾಧ್ಯದವರು ಕೇಳಿದ ಪ್ರಶ್ನೆಗೆ, ನನಗೆ ಆಪರೇಷನ್ ಕಮಲ ಮಾಡುವಷ್ಟು ಧೈರ್ಯ ಬಿಜೆಪಿ ನಾಯಕರಿಗೆ ಇಲ್ಲ,
ನನ್ನ ಸಮೀಪ ಯಾರು ಬರುವ ಪ್ರಶ್ನೆ ಇಲ್ಲ, ಎಂದು ಸ್ಪಷ್ಟತೆ ನೀಡಿದರು. ನಾವು ಕಾಂಗ್ರೆಸ್ ಪಕ್ಷದ ಟಿಕೇಟ್ ಪಡೆದು ಕಾಂಗ್ರೆಸ್ ನಿಂದ ಗೆದ್ದಿದ್ದೇವೆ ,
ನಾವು ಬಿಜೆಪಿಗೆ ಯಾಕೆ ಹೋಗಬೇಕು, ಶಾಸಕ ರಮೇಶ್ ಜಾರಕಿಹೋಳಿ ಬಿಜೆಪಿ ಪಕ್ಷಕ್ಕೆ ಹೋಗುವ ವಿಚಾರ,
ಹೋಗುವರಿಗೆ ಕಟ್ಟಿ ಹಾಕಿ ಉಳಿಸಿಕೊಳ್ಳಲು ಸಾಧ್ಯವಿಲ್ಲ,
ಬಿಜೆಪಿಗೆ ಹೋಗುವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋಗಲಿ ಎಂದು ರಮೇಶ್ ಜಾರಕಿಹೋಳಿಗೆ ದರ್ಶನಾಪುರ ಸವಾಲ್ಎಸೆದರು.
ಪಕ್ಷ ಬಿಟ್ಟು ಬಿಜೆಪಿ ಹೋಗುತ್ತಾರೆಂದರೆ ಜಾರಕಿಹೋಳಿ ಬೇಗ ಹೋಗಲಿ, ತಡಯಾಕೆ ಮಾಡುತ್ತಿದ್ದಾರಾ ಗೊತ್ತಿಲ್ಲ,
ಕಾಂಗ್ರೆಸ್ ಗೆ ರಮೇಶ್ ಜಾರಕಿಹೋಳಿ ಅನಿವಾರ್ಯವಲ್ಲ, ಪಕ್ಷಕ್ಕೆ ಯಾರು ಅನಿವಾರ್ಯ ವಲ್ಲ, ಒಬ್ಬರು ಹೋಗುತ್ತಾರೆ ಒಬ್ಬರು ಬರುತ್ತಾರೆ,
ಪಕ್ಷದ ಟಿಕೇಟ್ ಪಡೆದು ಗೆದ್ದವರು 5 ವರ್ಷ ಪಕ್ಷದ ನಿಷ್ಠಾವಂತರಾಗಿ ಇರಬೇಕು, ಯಾವುದೇ ಸಣ್ಣ ಪುಟ್ಟ ಅಡಚಣೆ ಇದ್ರು ಸಹಿಸಿಕೊಳ್ಳಬೇಕು,
ಮೈತ್ರಿ ಸರ್ಕಾರದಲ್ಲಿ ಸಣ್ಣ ಪುಟ್ಟ ಸಮಸ್ಯೆ ಇರವುದು ಸಹಜವಾಗಿದೆ, 5 ವರ್ಷ ಕಾಂಗ್ರೆಸ್ ಕುಮಾರಸ್ವಾಮಿ ಅವರಿಗೆ ಅಧಿಕಾರ ಕೊಟ್ಟಿದೆ,
ಎಲ್ಲಿಯೂ ಕೂಡ ಮಾಜಿ ಸಿಎಂ ಸಿದ್ದರಾಮಯ್ಯ ಆಗಲಿ, ಕಾಂಗ್ರೆಸ್ ಶಾಸಕರಾಗಲಿ, ಸಿಎಂ ಕುಮಾರಸ್ವಾಮಿ ಅವರನ್ನು ಸಿಎಂ ಸ್ಥಾನದಿಂದ ಇಳಿಸಿ, ಸಿದ್ದರಾಮಯ್ಯ ಅವರನ್ನು ಸಿಎಂ ಮಾಡಬೇಕೆಂದು ಯಾರು ಹೇಳಿಲ್ಲ,
ಮುಂದು ಚುನಾವಣೆ ನಡೆದರೆ ಜನ ಆಶೀರ್ವಾದ ಮಾಡಿದರೆ ಸಿಎಂ ಸ್ಥಾನದ ಕುರ್ಚಿ ನನಗೆ ಕೊಟ್ಟರೆ, ನಾನು ತೆಗೆದುಕೊಳ್ಳುತ್ತೆನೆ , ನನಗೆ ಸಚಿವ ಸ್ಥಾನ ಕೊಟ್ಟರೆ ನಿಭಾಯಿಸುತ್ತೆನೆ ಎಂದು ಮನದಾಳದ ಇಂಗಿತ ವ್ಯಕ್ತಪಡಿಸಿದರು.