ದಸಾರ ಹಬ್ಬ ಸರಳವಾಗಿರಲಿ, ಕೊರೊನಾ ನಿಯಮ ಪಾಲಿಸಿ-ಶಿರವಾಳ
ದಸಾರ ಹಬ್ಬ ಸರಳವಾಗಿರಲಿ, ಕೊರೊನಾ ನಿಯಮ ಪಾಲಿಸಿ-ಶಿರವಾಳ
ಶಹಾಪುರಃ ಕೊರೊನಾ ಮಹಾಮಾರಿ ದಿನೇ ದಿನೇ ಹೆಚ್ಚಾಗುತ್ತಿದೆ. ಲಾಕ್ ಡೌನ್ ತೆರವುಗೊಳಿಸಲಾಗಿದೆ ಎಂದ ಮಾತ್ರಕ್ಕೆ ಕೊರೊನಾ ಮುಕ್ತವಾಗಿಲ್ಲ. ಅದು ಹೆಚ್ಚಾಗುತ್ತಲಿದೆ. ಸದ್ಯ ಕೊರೊನಾ ತಡೆಗೆ ಪ್ರತಿಯೊಬ್ಬರು ಮುಂಜಾಗೃತೆವಹಿಸುವದು ಅಗತ್ಯವಿದೆ ಎಂದು ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ ತಿಳಿಸಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ದಸರಾ, ದೀಪಾವಳಿ ಹಬ್ಬಗಳ ಸಂದರ್ಭದಲ್ಲಿ ನಾಗರಿಕರು ಒಂದಡೆ ಗುಂಪಾಗಿ ಸೇರುವದು ತರವಲ್ಲ. ಕೊರೊನಾ ಸಂದರ್ಭದಲ್ಲಿ ಜನ ಜಂಗುಳಿ ಕಲಿಯವುದು ತರವಲ್ಲ. ಹಬ್ಬ ಆಚರಣೆ ಸರಳವಾಗಿ ನಿಯಮಿತವಾಗಿ ಇರಲಿ. ಪ್ರತಿಯೊಬ್ಬರು ಕೊರೊನಾ ನಿಯಮಗಳನ್ನು ಪಾಲಿಸಬೇಕು.
ಪರಸ್ಪರ ಅಂತರ ಕಾಪಾಡಬೇಕು. ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಆಗಾಗ ಸೋಪು ಮೂಲಕ ಕೈತೊಳೆದುಕೊಳ್ಳಬೇಕು. ಇವುಗಳನ್ನು ಕಟ್ಟು ನಿಟ್ಟಾಗಿ ಜನರು ಪಾಲಿಸುವ ಮೂಲಕ ಆರೋಗ್ಯ ರಕ್ಷಣೆಗೆ ಮುಂದಾಗಬೇಕು. ಪ್ರತಿಯೊಬ್ಬರು ಕಾಳಜಿಪೂರ್ವಕವಾಗಿ ಎಚ್ಚರಿಕೆವಹಿಸಬೇಕು ಎಂದು ಅವರು ಕರೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ನಾಗರಿಕರೆಲ್ಲರಿಗೂ ಹಬ್ಬದ ಶುಭಾಶಯಗಳನ್ನು ಅವರು ತಿಳಿಸಿದ್ದಾರೆ.