ಬಸವಭಕ್ತಿ
ವಿನಯವಾಣಿ ವಚನ ಸಿಂಚನ : ತನು ಮನ ಧನ ವಂಚನೆಯಾದಡೆ…
ಸತಿ ಸುತ ಮಾತಾಪಿತರಿಗೆಂದು ಪಡೆದಡೆ ನಿಮ್ಮಾಣೆ ಕಂಡಯ್ಯಾ.
ಮಾನವರ ಸೇವೆಯ ಮಾಡಿದಡೆ ನಿಮ್ಮಾಣೆ ಕಂಡಯ್ಯಾ.
ನೀವಲ್ಲದನ್ಯಕ್ಕೆರಗಿದಡೆ ನಿಮ್ಮಾಣೆ ಕಂಡಯ್ಯಾ.
ಎನ್ನ ಸತಿಯಲ್ಲದನ್ಯ ಸತಿಗಳುಪಿದಡೆ ನಿಮ್ಮಾಣೆ ಕಂಡಯ್ಯಾ.
ತನು ಮನ ಧನ ವಂಚನೆಯಾದಡೆನಾಚಯ್ಯಪ್ರಿಯ ಮಲ್ಲಿನಾಥಯ್ಯಾ, ನಿಮ್ಮಾಣೆ ಕಂಡಯ್ಯಾ.
-ದಶಗಣ ಸಿಂಗಿದೇವಯ್ಯ