ಜನಮನ

ಕಾಯಕ ತತ್ವ ಪಾಲಿಸಿ ಅಜ್ಜನಿಗೆ ಸಾರ್ಥಕ ಶ್ರದ್ಧಾಂಜಲಿ ಸಲ್ಲಿಸಿದ ವಿಜಯಪುರ ಡಿಸಿ

ವಿಜಯಪುರ: ಇಡೀ ಉತ್ತರ ಕರ್ನಾಟಕ ಪ್ರದೇಶದ ಜನ ನೆರೆ ಹಾವಳಿಯಿಂದ ತತ್ತರಸಿದೆ. ಅದರಲ್ಲೂ ಕೃಷ್ಣೆ ಮತ್ತು ಭೀಮೆಯರಿಬ್ಬರೂ ಭೋರ್ಗರೆಯುವ ವಿಜಯಪುರದಲ್ಲಂತೂ ಪ್ರವಾಹದ ಪರಿಣಾಮ ಹೇಳತೀರದಾಗಿದೆ. ಜನರ ಸಂಕಷ್ಟ ಕಂಡವರು ಅದೆಂಥವರಾಗಿದ್ದರು ಕಣ್ಣೀರಾಗುವುದು ಗ್ಯಾರಂಟಿ. ಅಂಥ ಜನರ ಕಣ್ಣೀರೊರೆಸಲು ನಿಂತ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಅವರು ದಣಿವರಿಯದ ಕಾಯಕ ಪ್ರಗ್ನೆ ಮೂಲಕ ಅಕ್ಷರಶಹ ಬಸವಾದಿ ಶರಣರ ಕಾಯಕವೇ ಕೈಲಾಸ ತತ್ವ ಪಾಲಿಸಿದ್ದಾರೆ.

ಕಳೆದ ಶುಕ್ರವಾರ ಬೆಳಗಾವಿ ಜಿಲ್ಲೆ, ಬೈಲಹೊಂಗಲ ತಾಲೂಕಿನ ನಾಗನೂರ ಗ್ರಾಮದಲ್ಲಿ ವಿಜಯಪುರ ಡಿಸಿ ವೈ.ಎಸ್.ಪಾಟೀಲ್ ಅವರ ಅಜ್ಜ ಎಂ.ಎಚ್.ನಾಯ್ಕರ್ (90) ಅವರು ನಿಧನರಾಗಿದ್ದಾರೆ. ಆದರೆ, ಕರ್ತವ್ಯ ಪ್ರಗ್ನೆ ಮೈಗೂಡಿಸಿಕೊಂಡ ಡಿಸಿ ಪಾಟೀಲ್ ರು ಪ್ರವಾಹಕ್ಕೆ ಸಿಲುಕಿ ನೊಂದವರ ಕಣ್ಣೀರೊರೆಸುವುದೇ ಅಜ್ಜನಿಗೆ ಸಲ್ಲಿಸುವ ಸಾರ್ಥಕ ಶ್ರದ್ಧಾಂಜಲಿ ಎಂದು ಭಾವಿಸಿ ಅಜ್ಜನ ಅಂತ್ಯಕ್ರಿಯೆಗೂ ತೆರಳದೆ ನೊಂದ ಜನರ ನೆರವಿನಲ್ಲಿ ತೊಡಗಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button