ದಿಗ್ಗಿ ಸಂಗಮೇಶ್ವರರ ರಥೋತ್ಸವ ವೇಳೆ ಅಡಚಣೆ ಯಾಕೆ ಗೊತ್ತೆ.?
ಸಂಭ್ರಮದ ದಿಗ್ಗಿ ಸಂಗಮೇಶ್ವರ ರಥೋತ್ಸವ
ಉತ್ತುತ್ತಿ, ಬಾಳೆಹಣ್ಣು ಎಸೆದು ಪ್ರಾರ್ಥಿಸಿದ ಭಕ್ತರು
ಯಾದಗಿರಿ, ಶಹಾಪುರಃ ತಾಲೂಕಿನ ದಿಗ್ಗಿ ಗ್ರಾಮದ ಶ್ರೀ ಸಂಗಮೇಶ್ವರ ರಥೋತ್ಸವ ಮಂಗಳವಾರ ಸಂಜೆ ಸಂಭ್ರಮದಿಂದ ಭಕ್ತರ ಉದ್ಘೋಷದೊಂದಿಗೆ ಜರುಗಿತು.
ಪ್ರತಿ ಶ್ರಾವಣ ಮಾಸದ ನಾಲ್ಕನೇ ಸೋಮವಾರದ ಮರುದಿನ ನಡೆಯುವ ರಥೋತ್ಸವ ಮಂಗಳವಾರ ಎಂದಿನಂತೆ ಸಂಭ್ರಮ ಸಡಗರದಿಂದ ನಡೆಯಿತು.
ಸಾವಿರಾರು ಭಕ್ತರು ಭವ್ಯ ರಥೋತ್ಸವ ಜರುಗುವದನ್ನು ಕಣ್ತುಂಬಿಕೊಂಡರು. ಈ ಸಂದರ್ಭದಲ್ಲಿ ಭಕ್ತಾಧಿಗಳು ಅಲ್ಲದೆ ವಿಶೇಷವಾಗಿ ನೂತನ ದಂಪತಿಗಳು ರಥೋತ್ಸವಕ್ಕೆ ಬಾಳೆಹಣ್ಣು, ಉತ್ತುತ್ತಿ ಎಸೆದು ಪ್ರಾರ್ಥನೆ ಸಲ್ಲಿಸಿದರು. ತಮ್ಮ ಇಷ್ಠಾರ್ಥ ಪೂರೈಸಿದಲ್ಲಿ ಮುಂದಿನ ವರ್ಷ ಮತ್ತೇ ರಥೋತ್ಸವದಲ್ಲಿ ಭಾಗವಹಿಸಿ ಹರಕೆ ತೀರಿಸುತ್ತೇವೆ ಎಂದು ಪ್ರಾರ್ಥನೆ ಸಲ್ಲಿಸುವ ವಾಡಿಕೆ ಇದೆ. ಅದರಂತೆ ಭಕ್ತಾಧಿಗಳು ರಥೋತ್ಸವ ಸಂದರ್ಭದ ಹರ್ಷೋದ್ಘಾರದೊಂದಿಗೆ ನಮನಗಳನ್ನು ಸಲ್ಲಿಸಿದರು. ಬೆಳಗ್ಗೆಯಿಂದಲೇ ಮೂಲ ವಿಗ್ರಹಕ್ಕೆ ಅಬಿಷೇಕ, ಹೂವುಗಳಿಂದ ಅಲಂಕಾರ ನಡೆದಿತ್ತು. ಅಲ್ಲದೆ ನೈವೇದ್ಯ, ಕಾಯಿ ಕರ್ಪೂರಗಳನ್ನು ಭಕ್ತಾಧಿಗಳು ಅರ್ಪಿಸಿ ಶ್ರೀದೇವರ ಕೃಪೆ ಪಡೆದರು.