‘ಕಾಣದ ಕಣ್ಣು’ ಈ ಕಥೆ ಓದಿ ಹಲವು ಚಿಂತನೆ ಮೂಡಬಹುದು
ಕಾಣದ ಕಣ್ಣು
ರಾಜಪ್ಪನಿಗೆ ಆಗಲೇ ಸುಮಾರು ಎಪ್ಪತ್ತು ವರ್ಷ. ಹೆಂಡತಿ ತೀರಿಹೋಗಿದ್ದಾಳೆ. ಮಗ, ಸೊಸೆ ಬೇರೆ ಊರಿನಲ್ಲಿ ನೆಲೆಯಾಗಿದ್ದಾರೆ. ಈತ ಒಬ್ಬನೇ ತನ್ನೂರಿನ ದೊಡ್ಡ ಮನೆಯಲ್ಲಿ ಉಳಿದಿದ್ದಾನೆ.
ಯಾರೋ ಬಂದು ದಿನವೂ ಅಡುಗೆ ಮಾಡಿಕೊಟ್ಟು ಹೋಗುತ್ತಾರೆ, ಮನೆಯಲ್ಲಿ ಆಳುಗಳಿದ್ದಾರೆ. ಈತನದು ಭಾರಿ ಶ್ರೀಮಂತರ ಮನೆತನ. ಹೊಲದ ಉತ್ಪನ್ನ ತುಂಬ ದೊಡ್ಡದು. ಅದಕ್ಕೆಂದೇ ಆತನಿಗೆ ಊರು ಬಿಟ್ಟು ಹೋಗಲು ಮನಸ್ಸಿಲ್ಲ.
ಈ ಸಂದರ್ಭದಲ್ಲಿ ರಾಜಪ್ಪನ ಕಣ್ಣು ಮಂದವಾಗತೊಡಗಿದವು. ಯಾವುದೂ ಸ್ಪಷ್ಟವಾಗಿ ಕಾಣುತ್ತಿಲ್ಲ. ಹೀಗೆಯೇ ಮುಂದುವರೆದರೆ ಆರು ತಿಂಗಳಲ್ಲಿ ತಾನು ಪೂರ್ತಿ ಅಂಧನೇ ಆಗಿಬಿಡುತ್ತೇನೆಂಬ ಭಯ ಕಾಡತೊಡಗಿತು.
ಕಂಡವರನ್ನೆಲ್ಲ ಪರಿಹಾರಕ್ಕಾಗಿ ಕೇಳಿದ. ಆಗ ಯಾರೋ ಒಬ್ಬರು ದಿನಕರ ಪಂಡಿತನ ಬಗ್ಗೆ ಹೇಳಿದರು. ಅವನು ಕಣ್ಣಿನ ದೋಷವನ್ನು ಖಂಡಿತವಾಗಿಯೂ ಪರಿಹರಿಸುತ್ತಾನೆ. ಆದರೆ ಅವನ ಫೀಸು ಬಹಳ ಹೆಚ್ಚು ಎಂದರು.
ರಾಜಪ್ಪ ದಿನಕರ ಪಂಡಿತನನ್ನು ಕರೆಸಿ ಮಾತನಾಡಿದ. ಆತನೂ ಅವನು ಕಣ್ಣಿನ ಪರೀಕ್ಷೆ ಮಾಡಿ ಆರು ತಿಂಗಳಿನಲ್ಲಿ ಸಂಪೂರ್ಣ ಗುಣವಾಗುವ ಭರವಸೆನೀಡಿದ.
ನಿರೀಕ್ಷಿಸಿದಂತೆ ಅವನ ಫೀಸೂ ಭಾರಿಯಾಗಿಯೇ ಇತ್ತು. ಕಣ್ಣು ಮುಖ್ಯವಲ್ಲವೇ? ರಾಜಪ್ಪ ಫೀಸನ್ನು ಒಪ್ಪಿದ.
ದಿನಕರ ಪಂಡಿತ ಹೇಳಿದ, ‘ನನಗೆ ಮೊದಲು ಇಪ್ಪತ್ತು ಸಾವಿರ ರೂಪಾಯಿ ಕೊಡಬೇಕು. ಆರು ತಿಂಗಳಿನ ನಂತರ ಕಣ್ಣು ಪೂರ್ತಿ ಗುಣವಾದ ಮೇಲೆ, ಸ್ಪಷ್ಟವಾಗಿ ಕಾಣತೊಡಗಿದೊಡನೆ ಉಳಿದ ಒಂದು ಲಕ್ಷ ಎಂಬತ್ತು ಸಾವಿರ ರೂಪಾಯಿ ಕೊಡತಕ್ಕದ್ದು’ ಈ ಕರಾರಿಗೆ ರಾಜಪ್ಪ ಒಪ್ಪಿದ. ಚಿಕಿತ್ಸೆ ಪ್ರಾರಂಭವಾಯಿತು.
ದಿನಕರ ಪಂಡಿತ ಒಳ್ಳೆಯ ವೈದ್ಯನಾದರೂ ಬಹಳ ಆಸೆಬರುಕ. ದಿನಾಲು ಬಂದು ರಾಜಪ್ಪನ ಕಣ್ಣುಗಳಿಗೆ ಔಷಧಿ ಹಾಕಿ ನಂತರ ಕಣ್ಣುಗಳ ಮೇಲೆ ಔಷಧಿಯ ಪಟ್ಟಿಯನ್ನು ಹಾಕಿ ಬಿಡುತ್ತಿದ್ದ.
ಅದನ್ನು ತೆಗೆಯುವವರೆಗೆ ರಾಜಪ್ಪನಿಗೆ ಏನೂ ಕಾಣುತ್ತಿರಲಿಲ್ಲ. ಪಟ್ಟಿಯನ್ನು ತೆಗೆದ ಮೇಲೆಯೂ ಆದಷ್ಟು ಮಟ್ಟಿಗೆ ಕಣ್ಣು ಮುಚ್ಚಿಕೊಂಡೇ ಇರುವಂತೆ ತಾಕೀತು ಮಾಡಿದ್ದ.
ದಿನಕರ ಪಂಡಿತ ರಾಜಪ್ಪನ ಮನೆಯನ್ನು ಗಮನಿಸಿದ. ಅವನ ದೇವರ ಮನೆಯಲ್ಲಿ ಬಂಗಾರದ, ಬೆಳ್ಳಿಯ ಪಾತ್ರೆಗಳು, ಆಭರಣಗಳು, ವಿಗ್ರಹಗಳಿದ್ದವು. ಅವುಗಳ ಬೆಲೆ ಆದಷ್ಟು ಲಕ್ಷ ರೂಪಾಯಿಗಳಾಗುತ್ತಿತ್ತೋ? ಪಂಡಿತ ದಿನಕ್ಕೊಂದರಂತೆ ಒಂದೊಂದನ್ನೇ ಕದ್ದುಕೊಂಡು ಮನೆಗೆ ಹೋಗುತ್ತಿದ್ದ.
ಆರು ತಿಂಗಳಲ್ಲಿ ದೇವರ ಮನೆ ಚೊಕ್ಕಟವಾಗುವುದಷ್ಟೇ ಅಲ್ಲ, ಮನೆಯಲ್ಲಿದ್ದ ಯಾವ ಬೆಲೆಬಾಳುವ ಸಾಮಾನುಗಳೂ ಉಳಿಯಲಿಲ್ಲ. ಆರು ತಿಂಗಳಿನ ಚಿಕಿತ್ಸೆ ಮುಗಿದ ನಂತರ ಈಗ ರಾಜಪ್ಪನಿಗೆ ಸ್ಪಷ್ಟವಾಗಿ ಕಾಣುವುದರಿಂದ ಉಳಿದ ಫೀಸನ್ನು ನೀಡಲು ದಿನಕರ ಪಂಡಿತ ಒತ್ತಾಯಿಸಿದ.
ಕಣ್ಣು ಚೆನ್ನಾಗಿ ಕಾಣುತ್ತಿದ್ದ ರಾಜಪ್ಪ ಮನೆಯನ್ನು ಗಮನಿಸಿದಾಗ ದಿನಕರನ ಮೋಸದ ಅರಿವಾಗಿ ಹಣ ನೀಡುವುದಿಲ್ಲವೆಂದು ಹೇಳಿದ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882