ಪ್ರಮುಖ ಸುದ್ದಿ
ಸಿಎಂ ಯಡಿಯೂರಪ್ಪಗೆ ಮಾಜಿ ಸಿಎಂ ನೇರವಾಗಿ ಹೇಳಿದ್ದೇನು?
ಬೆಂಗಳೂರು : ಇಂದು ವಿಧಾನಸಭೆಯಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಜನರ ಕೆಲಸ ಮಾಡುವುದು ನಮ್ಮ ಅದ್ಯ ಕರ್ತವ್ಯ. ಆದರೆ ಯಡಿಯೂರಪ್ಪನವರು ಎಂದಿಗೂ ಜನಾದೇಶದಿಂದ ಮುಖ್ಯಮಂತ್ರಿಯಾಗಿ ಸರ್ಕಾರ ರಚಿಸಲಿಲ್ಲ.
ಅವರ ಸುದೀರ್ಘ ರಾಜಕೀಯದ ಜೀವನದಲ್ಲಿ ಅವರಿಗೆ ಮುಖ್ಯಮಂತ್ರಿಯಾಗಲು ಒಮ್ಮೆಯೂ ಜನಾದೇಶ ಸಿಗಲಿಲ್ಲ. 2008 ರಲ್ಲಿ 110 ಜನ ಶಾಸಕರು ಮತ್ತು 2018 ರಲ್ಲಿ 105 ಜನ ಶಾಸಕರು ಆಯ್ಕೆಯಾದರು. ಈಗಲೂ ಕೂಡ 105 ಶಾಸಕರಿಂದ ಮುಖ್ಯಮಂತ್ರಿಯಾಗಿದ್ದೀರಿ ಎಂದು ಯಡಿಯೂರಪ್ಪ ಅವರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.