ಕಥೆ

ಅಜ್ಞಾನ, ಕತ್ತಲೆ ಕಳೆದರೆ ನಿಜಾನಂದ

ದಿನಕ್ಕೊಂದು ಕಥೆ ವಿನಯವಾಣಿಯಲ್ಲಿ ಓದಿ

ದಿನಕ್ಕೊಂದು ಕಥೆ

ಅಜ್ಞಾನ, ಕತ್ತಲೆ ಕಳೆದರೆ ನಿಜಾನಂದ

ಅಲ್ಲೊಂದು ಅರಣ್ಯ ಪ್ರದೇಶ. ಹೊತ್ತು ಮುಳುಗಿದರೆ ಸಾಕು, ಸುತ್ತಮುತ್ತ ಕತ್ತಲೆ ಆವರಿಸುತ್ತದೆ. ಆಗ ಅಲ್ಲಿಯ ವಾತಾವರಣ ನಿಶ್ಯಬ್ದ. ಅಲ್ಲೊಂದು ಗೂಬೆ. ಅದು ರಾತ್ರಿಯ ಹೊತ್ತು ಕಣ್ಣು ಬಿಟ್ಟಿತು. ಸುತ್ತೆಲ್ಲ ನೋಡಿತು. ಪಶುಪಕ್ಷಿ, ದನಕರು, ಜನಮನ, ಕಾಡಿಗೆ ಕಾಡೇ ಘನವಾದ ನಿದ್ರೆಯಲ್ಲಿತ್ತು.

ಗೂಬೆ, “ಈ ಪ್ರಪಂಚದಲ್ಲಿ ಎಲ್ಲರೂ ಮಲಗಿ ವ್ಯರ್ಥ ಜೀವನ ಕಳೆಯುತ್ತಿದ್ದಾರೆ. ನಾನು ಮಾತ್ರ ಎಚ್ಚರವಾಗಿದ್ದೇನೆ. ಆದ್ದರಿಂದ ಈ ಜಗತ್ತಿನಲ್ಲಿ ನಾನೇ ಏಕೈಕ ಜಾಗ್ರತ ವ್ಯಕ್ತಿ”
ಎಂದು ಕೊಂಡಿತು. ಪಾಪ ಆ ಗೂಬೆ ಹಗಲಿನಲ್ಲಿ ಕಣ್ಣು ಬಿಟ್ಟಿಲ್ಲ. ಕೋಗಿಲೆಯ ಮಧುರ ಗಾಯನ, ಗಿಳಿಯ ಸವಿನುಡಿ, ನವಿಲಿನ ನರ್ತನ, ಲಕ್ಷಾಂತರ ಪಕ್ಷಿಗಳ ಕಲರವ ಕೇಳಿಲ್ಲ. ಕತ್ತಲೆ ಪರದೆ ಸರಿಸಿಲ್ಲ. ಬೆಳಕಿನ ಲೋಕದ ಭವ್ಯತೆಯ ಅನುಭವ ಕಂಡಿಲ್ಲ. ಅದು ಅಹಂಕರಿಸದೆ ಇನ್ನೇನು ಮಾಡೀತು?.

ಅಜ್ಞಾನ ಎಂಬ ಕತ್ತಲೆಯಿಂದ ಮನುಷ್ಯನಲ್ಲಿ ರಾಗಾದಿ ಬಂಧನಗಳ ಕಳೆಯು ಹುಲುಸಾಗಿ ಬೆಳೆದಿದೆ. ಬಂಧನಭೂಮಿ ಎನ್ನಿಸಿರುವ ಈ ಅಜ್ಞಾನದ ಕತ್ತಲೆಯನ್ನು ಕಳೆದರೆ ಸಾಕು, ನಮಗಾಗಿ ಬೆಳ್ಳಂ ಬೆಳಕಿನ ಲೋಕ ಕಾಣುವುದು. ಆಗ ನನಾರೆಂಬ ಅರಿವಿನ, ನಿಜಾನಂದದ ಅನುಭವ ಆಗುವುದು.

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.

Related Articles

Leave a Reply

Your email address will not be published. Required fields are marked *

Back to top button