ಕಥೆ

“ರೈತನ ಪ್ರಾಮಾಣಿಕತೆಗೆ ಸಿಕ್ಕ ಗೌರವ” ಉತ್ತಮ‌ ಕಥೆ ಓದಿ

ದಿನಕ್ಕೊಂದು ಕಥೆ ಓದಿ ಬದುಕಿನಲ್ಲಿ ಕಂಡುಕೊಳ್ಳಿ ಸರಳತೆ

ದಿನಕ್ಕೊಂದು ಕಥೆ

ಪ್ರಾಮಾಣಿಕತೆ

ಪ್ರಾಮಾಣಿಕತೆ ಮಾನವನಲ್ಲಿರುವ ಉತ್ತಮ ಗಣ. ತನ್ನ ಬದುಕಿನಲ್ಲಿ ಅಳವಡಿಸಿಕೊಂಡರೆ, ಮಾನಸಿಕ ಶಾಂತಿ, ನೆಮ್ಮದಿ ಸಿಗುತ್ತದೆ. ಎಲ್ಲಾ ಸಂದರ್ಭಗಳಲ್ಲಿ ಪ್ರಾಮಾಣಿಕವಾಗಿರಲು ಪ್ರಯತ್ನಿಸಬೇಕು. ಪ್ರಾಮಾಣಿಕತೆ ಎಂಬುದು ನಮ್ಮ ಜೀವನದಲ್ಲಿ ಅತ್ಯಂತ ಮುಖ್ಯವಾದ ಗುಣ. ಪ್ರಾಮಾಣಿಕತೆಗೆ ಒಂದು ಉತ್ತಮ ಕಥೆ ನೋಡುವ.

ಒಮ್ಮೆ ಒಬ್ಬ ರೈತ ತನ್ನ ಹೊಲದಲ್ಲಿ ಕೆಲಸ ಮಾಡುತ್ತಿದ್ದ. ಒಮ್ಮೆಲೆ ಅವನ ಗುದ್ದಲಿಗೆ ಏನೋ ಗಟ್ಟಿಯಾಗಿ ತಗುಲಿತು. ಅಗೆದು ನೋಡಿದರೆ, ಅಲ್ಲಿ ಒಂದು ಹಳೆಯ ಮಣ್ಣಿನ ಕುಡಿಕೆ,! ಕುಡಿಕೆಯನ್ನು ತೆರೆದಾಗ ಅದರಲ್ಲಿ ಬಂಗಾರದ ನಾಣ್ಯಗಳು ತುಂಬಿದ್ದವು.
ಆ ರೈತನಿಗೆ ಆ ನಾಣ್ಯಗಳನ್ನು ನೋಡಿ ಬಹಳ ಸಂತೋಷವಾಯಿತು. ಆದರೆ ಕ್ಷಣ ಮಾತ್ರ ಆತನ ಮನಸ್ಸು ಒದ್ದಾಡತೊಡಗಿತು. ಏಕೆಂದರೆ “ಈ ನಾಣ್ಯಗಳು ನನ್ನವೇ? ಅಥವಾ ಇದು ಬೇರೆಯವರದ್ದೇ?” ಎಂದು ಆತ ತನ್ನನ್ನು ತಾನು ಪ್ರಶ್ನಿಸಿಕೊಂಡನು. ಕೊನೆಗೆ ಆತ ತನ್ನ ಮನಸ್ಸಿಗೆ “ಇದು ನನ್ನದಲ್ಲ, ಇದು ಬೇರೆಯವರದು. ನಾನು ಇದನ್ನು ಕಂಡುಕೊಂಡಿದ್ದೇನೆ.” ಎಂದು ಹೇಳಿಕೊಂಡ.

ಆತ ತಕ್ಷಣ ತನ್ನ ಹಳ್ಳಿಯ ಮುಖ್ಯಸ್ಥನ ಬಳಿ ಹೋಗಿ ನಡೆದದ್ದನ್ನೆಲ್ಲ ಹೇಳಿದ. ಮುಖ್ಯಸ್ಥ ಆ ರೈತನ ಪ್ರಾಮಾಣಿಕತೆಯನ್ನು ಮೆಚ್ಚಿ, ಆ ನಾಣ್ಯಗಳನ್ನು ಹಳ್ಳಿಯ ಒಳ್ಳೆಯ ಕೆಲಸಗಳಿಗೆ ಖರ್ಚು ಮಾಡುವುದಾಗಿ ಹೇಳಿದ. ಈ ಸುದ್ದಿ ಹಬ್ಬಿದಂತೆ ಆ ರೈತನ ಪ್ರಾಮಾಣಿಕತೆಯ ಬಗ್ಗೆ ಎಲ್ಲೆಡೆ ಮಾತು. ಆತನಿಗೆ ಅನೇಕ ಬಹುಮಾನಗಳು ಸಿಕ್ಕವು. ಎಲ್ಲರ ಮನಸ್ಸಿನಲ್ಲಿ ಅವನಿಗೆ ಸಿಕ್ಕ ಗೌರವವೇ ಆತನಿಗೆ ಸಿಕ್ಕ ಅತ್ಯಂತ ದೊಡ್ಡ ಬಹುಮಾನ.

ನೀತಿ :– ಯಾವಾಗಲೂ ಸತ್ಯವನ್ನು ಹೇಳುವುದೇ ಪ್ರಾಮಾಣಿಕತೆ. ಪ್ರಾಮಾಣಿಕತೆಯಿಂದ ನಾವು ಇತರರ ಗೌರವವನ್ನು ಗಳಿಸಬಹುದು.

🖊️ಸಂಗ್ರಹ🖋️
*ಡಾ.ಈಶ್ವರಾನಂದ ಸ್ವಾಮೀಜಿ.*
📞 – 9341137882.

Related Articles

Leave a Reply

Your email address will not be published. Required fields are marked *

Back to top button