ಕಥೆ

ಬ್ರಾಹ್ಮಣನಾಗಿದ್ದ ರಾವಣ ಏಕೆ ರಾಕ್ಷಸನಾದ ???

ದಿನಕ್ಕೊಂದು ಕಥೆ ಓದಿ

ದಿನಕ್ಕೊಂದು ಕಥೆ

ಬ್ರಾಹ್ಮಣನಾಗಿದ್ದ ರಾವಣ ಏಕೆ ರಾಕ್ಷಸನಾದ ???

ರಾವಣನು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ. ಆದರೆ ಅವನ ತಾಯಿ ಕೈಕಸಿಯ ರಾಕ್ಷಸ ಸ್ವಭಾವ ಮತ್ತು ಮೂರು ಶಾಪಗಳು ಅವನ ಜೀವನವನ್ನು ಬದಲಾಯಿಸಿದವು. ರಾವಣನಿಗೆ ಜ್ಞಾನ ಮತ್ತು ಶಕ್ತಿಯ ಅಪಾರ ಗುಣಗಳಿದ್ದವು. ಆದರೆ ಅವನು ಈ ಶಕ್ತಿಯನ್ನು ತಪ್ಪು ದಿಕ್ಕಿನಲ್ಲಿ ಬಳಸಿದ. ಬ್ರಾಹ್ಮಣತ್ವ ಮತ್ತು ರಾಕ್ಷಸತ್ವದ ನಡುವಿನ ಈ ಸಂಘರ್ಷವು ಅವನ ವ್ಯಕ್ತಿತ್ವದಲ್ಲಿ ಸ್ಪಷ್ಟವಾಗಿ ಪ್ರತಿಫಲಿಸುತ್ತದೆ. ಜ್ಞಾನ, ಶಕ್ತಿ ಮತ್ತು ಯುದ್ಧ ಕಲೆಯಲ್ಲಿ ಪ್ರವೀಣನಾಗಿದ್ದರೂ, ರಾವಣನ ರಾಕ್ಷಸ ಪ್ರವೃತ್ತಿಯು ಅವನನ್ನು ಅಧರ್ಮದ ಹಾದಿಗೆ ತೆಗೆದುಕೊಂಡು ಹೋಯಿತು.

ರಾವಣನು ಲಂಕಾದ ಪ್ರಬಲ ರಾಜನಾಗಿದ್ದ ಹಾಗೂ ಮಹಾನ್ ವಿದ್ವಾಂಸನೂ ಆಗಿದ್ದ. ವೇದಗಳು ಮತ್ತು ಧರ್ಮಗ್ರಂಥಗಳಲ್ಲಿ ಪರಿಣಿತಿಯನ್ನು ಪಡೆದುಕೊಂಡವನಾಗಿದ್ದ. ರಾವಣನ ಸಂಹಾರಕ್ಕೆಂದೇ ಜನ್ಮ ತಾಳಿದ ಶ್ರೀರಾಮನು ಅಶ್ವಿನಿ ಮಾಸದ ಹತ್ತನೇ ದಿನದಂದು ರಾವಣನನ್ನು ಸಂಹಾರ ಮಾಡುತ್ತಾನೆ. ಪ್ರಪಂಚದಲ್ಲಿ ರಾವಣನೆಂಬ ಹೆಸರಿನ ಇನ್ನೊಬ್ಬ ವ್ಯಕ್ತಿ ಇರಲು ಸಾಧ್ಯವಿಲ್ಲ. ರಾಣನಲ್ಲಿದ್ದ ಕೆಟ್ಟ ಗುಣಗಳಿಂದಾಗಿ ಇಂದಿಗೂ ಯಾರು ತಮ್ಮ ಮಗುವಿಗೆ ಆತನ ಹೆಸರನ್ನು ಇಡಲು ಬಯಸುವುದಿಲ್ಲ. ರಾವಣನು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದನು, ಆದರೂ ಅವನು ರಾಕ್ಷಸ ಗುಣಗಳನ್ನು ಹೊಂದಿದ್ದನು. ಬ್ರಾಹ್ಮಣ ಮಗನಾಗಿದ್ದರೂ ರಾವಣ ಏಕೆ ರಾಕ್ಷಸನಾದ ಎಂಬ ಪ್ರಶ್ನೆ ನಮ್ಮನ್ನು ಕಾಡುವುದು ಸಹಜ. ರಾವಣನಿಗೆ ನೀಡಿದ್ದ ಈ ಮೂರು ಶಾಪಗಳೇ ಆತನಲ್ಲಿ ರಾಕ್ಷಸ ಗುಣಗಳು ಬೆಳೆಯಲು ಕಾರಣವಾಯಿತು.

ನಾರದ ಮುನಿಯ ಶಾಪ :–
ರಾವಣನು ರಾಕ್ಷಸನಾಗಲು ಮೊದಲ ಕಾರಣವೇನೆಂದರೆ ನಾರದ ಮುನಿಗಳ ಶಾಪವಾಗಿತ್ತು. ರಾವಣನ ಜನನದ ಮೊದಲು, ಅವನ ತಂದೆ ವಿಶ್ರವ ಮತ್ತು ಕೈಕಸಿಯ ನಡುವೆ ಶುಭ ಮುಹೂರ್ತದಲ್ಲಿ ಮಗು ಜನಿಸುತ್ತದೆ ಎಂಬ ಭರವಸೆ ಇತ್ತು. ಆದರೆ ಕೈಕಸಿ ತನ್ನ ದುರಾಸೆ ಮತ್ತು ಮಹತ್ವಾಕಾಂಕ್ಷೆಯಿಂದ ಈ ಭರವಸೆಯನ್ನು ತೊರೆದು ತಪ್ಪಾದ ಸಮಯದಲ್ಲಿ ಮಗುವಿಗೆ ಜನ್ಮ ನೀಡಿದಳು. ಈ ಕಾರಣಕ್ಕಾಗಿ ನಾರದ ಮುನಿಯು ರಾವಣನು ರಾಕ್ಷಸ ಸ್ವಭಾವವನ್ನು ಹೊಂದುತ್ತಾನೆ. ಅವನಲ್ಲಿ ಅಧರ್ಮದ ಪ್ರವೃತ್ತಿಯು ಹೆಚ್ಚಾಗುತ್ತದೆ ಎಂದು ಶಪಿಸಿದರು.

ಕುಬೇರನ ಶಾಪ :–
ರಾವಣನ ಸಹೋದರ ಮತ್ತು ಲಂಕಾದ ಅಧಿಪತಿಯಾಗಿದ್ದ ಕುಬೇರನು ರಾವಣನ ಅಹಂಕಾರವನ್ನು ನಿಯಂತ್ರಿಸಲು ಪ್ರಯತ್ನಿಸಿದನು. ರಾವಣನು ತನ್ನ ಸಹೋದರನನ್ನು ಸೋಲಿಸಿ ಲಂಕೆಯನ್ನು ವಶಪಡಿಸಿಕೊಂಡ. ಕುಬೇರನು ರಾವಣನಿಗೆ ನಿನ್ನಲ್ಲಿದ್ದ ಅತಿಯಾದ ಅಹಂಕಾರದಿಂದ, ದುಷ್ಟತನದಿಂದ ನಿನ್ನ ಅಂತ್ಯವನ್ನು ನೀನೇ ಕಂಡುಕೊಳ್ಳುತ್ತೀಯ ಎಂದು ಶಾಪವನ್ನು ನೀಡಿದನು.

ಬ್ರಹ್ಮ ದೇವನ ಶಾಪ :–
ರಾವಣ ಒಮ್ಮೆ ತನ್ನ ಶಕ್ತಿಯನ್ನು ಪ್ರದರ್ಶಿಸುವುದಕ್ಕಾಗಿ ಕೈಲಾಸ ಪರ್ವತವನ್ನು ಎತ್ತಲು ಪ್ರಯತ್ನಿಸಿದನು, ರಾವಣ ಈ ಪ್ರದರ್ಶನದ ಗುಣದಿಂದ ಶಿವನ ಕೋಪಗೊಂಡನು. ರಾವಣನು ತನ್ನ ತಪ್ಪನ್ನು ಅರಿತು ಶಿವನಲ್ಲಿ ಕ್ಷಮೆ ಕೇಳಿದನು. ಆದರೆ, ಬ್ರಹ್ಮ ದೇವನು ರಾವಣನಿಗೆ ಶ್ರೀರಾಮನ ಕೈಯಲ್ಲಿ ನಿನ್ನ ಸಂಹಾರವಾಗುತ್ತದೆ ಎನ್ನುವ ಶಾಪವನ್ನು ನೀಡಿದನು. ಅದು ಅಂತಿಮವಾಗಿ ರಾಮಾಯಣ ಎನ್ನುವ ಮಹಾ ಯುದ್ಧಕ್ಕೆ ಕಾರಣವಾಯಿತು.

ಈ ಮೂರು ಶಾಪಗಳ ಜೊತೆಗೆ, ರಾವಣನ ಸ್ವಂತ ಅಹಂಕಾರ ಮತ್ತು ಅಧರ್ಮದ ಹಾದಿಯಲ್ಲಿ ನಡೆದ ಕೆಲಸಗಳು ಅವನನ್ನು ರಾಕ್ಷಸನನ್ನಾಗಿ ಮಾಡಿದವು. ಅವನು ಸೀತೆಯನ್ನು ಅಪಹರಿಸಿದ್ದು ಮತ್ತು ರಾಮನೊಂದಿಗೆ ಯುದ್ಧ ಮಾಡಿದ್ದು ಇದಕ್ಕೆ ಸಾಕ್ಷಿ.
ರಾವಣನ ಕಥೆಯು ನಮಗೆ ಅನೇಕ ಪಾಠಗಳನ್ನು ಕಲಿಸುತ್ತದೆ. ಅತಿಯಾದ ಅಹಂಕಾರ, ಶಕ್ತಿಯ ದುರುಪಯೋಗ ಮತ್ತು ಅಧರ್ಮದ ಹಾದಿಯಲ್ಲಿ ನಡೆದರೆ ಯಾವ ಪರಿಣಾಮವಾಗುತ್ತದೆ ಎಂಬುದನ್ನು ಇದು ತೋರಿಸುತ್ತದೆ. ಬ್ರಾಹ್ಮಣ ಕುಲದಲ್ಲಿ ಜನಿಸಿದರೂ, ರಾವಣನ ಕೆಟ್ಟ ಕಾರ್ಯಗಳಿಂದಾಗಿ ಅವನನ್ನು ರಾಕ್ಷಸನೆಂದು ಕರೆಯಲಾಗುತ್ತದೆ.

ನೀತಿ :– ಈ ಕಥೆಯು ನಮಗೆ ಒಳ್ಳೆಯ ಕೆಟ್ಟಗಳನ್ನು ಪ್ರತ್ಯೇಕಿಸುವ ಮತ್ತು ಸದಾ ಧರ್ಮದ ಹಾದಿಯಲ್ಲಿ ನಡೆಯುವಂತೆ ಪ್ರೇರೇಪಿಸುತ್ತದೆ.

🖊️ಸಂಗ್ರಹ🖋️
*ಡಾ.ಈಶ್ವರಾನಂದ ಸ್ವಾಮೀಜಿ.*
📞 – 9341137882.

Related Articles

Leave a Reply

Your email address will not be published. Required fields are marked *

Back to top button