ಪ್ರಮುಖ ಸುದ್ದಿ

ಡಿಕೆಶಿ ಮನೆಗೆ ನಂಜಾವಧೂತ ಸ್ವಾಮೀಜಿ ಭೇಟಿ ಸಾಂತ್ವನ‌ದ ಮಾತು

ಡಿಕೆಶಿ ಮನೆಗೆ ನಂಜಾವಧೂತ ಸ್ವಾಮೀಜಿ ಭೇಟಿ ಸಾಂತ್ವನ‌ದ ಮಾತು

ಬೆಂಗಳೂರಃ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರ‌ ಮನೆಗೆ ಇಂದು ನಂಜಾವಧೂತ ಸ್ವಾಮೀಜಿ ಭೇಟಿ ನೀಡಿ‌ ಡಿಕೆಶಿ ಅವರಿಂದ ಸಿಬಿಐ ದಾಳಿ ಘಟನೆ ಕುರಿತು ಮಾತುಕಥೆ ನಡೆಸಿ ಸಾಂತ್ವನದ‌ ಮಾತುಗಳನ್ನಾಡಿ ಧೈರ್ಯ ತುಂಬುವ ಕೆಲಸ‌ ಮಾಡಿದರು.

ಈ ಸಂದರ್ಭದಲ್ಲಿನ ಬಿಚ್ಚಿ ಮಾತನಾಡಿದ ಡಿಕೆಶಿ, ರೇಡ್ ಸಂದರ್ಭ ಅಧಿಕಾರಿಗಳು ನನ್ನ ಸಿಬ್ಬಂದಿ, ಆಪ್ತ ಸಹಾಯಕನಿಗೆ ಹೊಡೆದಿದ್ದಾರೆ ಬೆದರಿಸಿದ್ದಾರೆ. ಅಲ್ಲದೆ ಮಗಳ‌ ಮದುವೆಗಾಗಿ ಎಂದು ಬಂಗಾರದ ಒಡವೆಗಳನ್ನು ತೆಗದಿಡಲಾಗಿತ್ತು ಅವುಗಳನ್ನು ಸಿಬಿಐ ಜಪ್ತಿ ಮಾಡಿಕೊಂಡಿದೆ ಇದರಿಂದ ನೋವಾಗಿದೆ ಎಂದು ಸ್ವಾಮೀಜಿ ಎದುರು ನೋವನ್ನು ತೋಡಿಕೊಂಡರು ಎನ್ನಲಾಗಿದೆ.

ಮತ್ತು ಸಿಬಿಐ, ಐಟಿ, ಇಡಿ ಎಲ್ಲವು‌ ದಾಳಿ ನಡೆಸಿವೆ ಇಲ್ಲಿವರೆಗೆ ಟಾರ್ಗೆಟ್ ಮಾಡಲಾಗಿದೆ. ಮಾಡಲಿ ನನ್ನ ಹತ್ರ ಎಲ್ಲದಕ್ಕೂ ದಾಖಲೆಗಳಿವೆ ಎಂದು ಡಿಕೆಶಿ ವಿಷಯ ಅಭಿಪ್ರಾಯ ಹಂಚಿಕೊಂಡಿರುವದು ತಿಳಿದು ಬಂದಿದೆ.

Related Articles

Leave a Reply

Your email address will not be published. Required fields are marked *

Back to top button