ಪ್ರಮುಖ ಸುದ್ದಿ

15 ರೂಪಾಯಿ ಸಿಗರೇಟ್ ದುಡ್ಡಿಗಾಗಿ ಘರ್ಷಣೆ : ಜೋಡಿ ಕೊಲೆ

ಬೆಂಗಳೂರು: ಗೋವಿಂದಪುರ ಮುಖ್ಯ ರಸ್ತೆಯ ಮೈದಾನದ ಬಳಿಯ ಅಂಗಡಿಯೊಂದರಲ್ಲಿ ಅಮೀನ್ ಎಂಬ ವ್ಯಕ್ತಿ 15 ರೂಪಾಯಿ ಬೆಲೆಯ ಸಿಗರೇಟ್ ಪಡೆದಿದ್ದಾರೆ. ಆದರೆ, ಅಂಗಡಿ ಮಾಲೀಕ ಸಿಗರೇಟಿನ ಹಣ ಕೇಳಿದಾಗ ನನಗೆ ಹಣ ಕೇಳ್ತೀಯಾ ಅಂತ ಗಲಾಟೆ ಆರಂಭಿಸಿದ್ದಾನೆ. ಅಂಗಡಿ ಮಾಲೀಕ ಫೋನ್ ಮಾಡಿ ಗೆಳೆಯರನ್ನು ಕರೆಸಿಕೊಂಡಿದ್ದಾನೆ. ಪರಿಣಾಮ ಘರ್ಷಣೆಯಲ್ಲಿ ಅಮೀನ್ ಮೇಲೆ ದೊಣ್ಣೆಯಿಂದ ತೀವ್ರ ಹಲ್ಲೆ ನಡೆಸಲಾಗಿದೆ. ಅಮೀನ್ ಮೇಲೆ ಹಲ್ಲೆ ವಿಷಯ ತಿಳಿದು ಸ್ಥಳಕ್ಕೆ ಬಂದ ಅಮೀನ್ ಸಹೋದರ ಮತೀನ್ ಮೇಲೂ ಹಲ್ಲೆ ನಡೆಸಲಾಗಿದೆ. ಹಲ್ಲೆಗೊಳಗಾದ ಇಬ್ಬರನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಇಬ್ಬರೂ ಕೊನೆಯುಸಿರೆಳೆದಿದ್ದಾರೆ.

ಘಟನಾ ವಿಷಯ ತಿಳಿಯುತ್ತಿದ್ದಂತೆ ಕೆ.ಜಿ.ಹಳ್ಳಿ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ‌ ನೀಡಿ ಪತಿಶೀಲನೆ ನಡೆಸಿದ್ದಾರೆ. ಆರೋಪಿಗಳಿಗಾಗಿ ಶೋಧ ನಡೆಸಿದ ಪೊಲೀಸರು ಕೆಲ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

Related Articles

Leave a Reply

Your email address will not be published. Required fields are marked *

Back to top button