ಅಂಕಣ

ದೇಶದ ಸಮಗ್ರತೆಗೆ ತಮ್ಮತನವನ್ನು ಧಾರೆಯೆರೆದ ‘ಬಾಬುಜಿ’

ಎಪ್ರೀಲ್ 5 – ಬಾಬುಜಗಜೀವನರಾಮರವರ ಜಯಂತಿ ನಿಮಿತ್ಯ ಈ ಲೇಖನ

– ರಾಘವೇಂದ್ರ ಹಾರಣಗೇರಾ
ಭಾರತದ ರಾಜಕೀಯ ಚರಿತ್ರೆಯಲ್ಲಿ ‘ಬಾಬುಜೀ’ ಎಂದೇ ಪ್ರಖ್ಯಾತಿಯನ್ನು ಪಡೆದ ಡಾ.ಬಾಬು ಜಗಜೀವನರಾಮ್‍ರವರು ಬಿಹಾರ ರಾಜ್ಯದ ಶಾಹಬಾದ್ ಜಿಲ್ಲೆಯ ಚಂದ್ವಾ ಗ್ರಾಮದ ಚಮ್ಮಾರ ಕುಲದ ಶೋಭಿರಾಮ ಮತ್ತು ವಸಂತದೇವಿ ದಂಪತಿಗಳ 5ನೇ ಮಗನಾಗಿ ಎಪ್ರೀಲ್ 5, 1908ರಂದು ಜನಿಸಿದರು.

ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದ ಬಾಬುಜಿ ಅವರು ಬನಾರಸ್ ಎಂಬ ಹಿಂದೂ ವಿಶ್ವವಿದ್ಯಾಲಯದಿಂದ ವಿಜ್ಞಾನ ವಿಭಾಗದಲ್ಲಿ ಇಂಟರಮಿಡಿಯಟ್ ಪದವಿಯನ್ನು ಪಡೆದರು. ಸ್ವತಂತ್ರ ಮತ್ತು ಅರಿವು ದಲಿತರ ವಿಮೋಚನೆಯ ಧಾರಿ ದೀಪವೆಂದು ಭಾವಿಸಿದ ಜಗಜೀವನರಾಮ್ ಅವರು ಸ್ವತಂತ್ರ ಚಳವಳಿ ಹಾಗೂ ಶಿಕ್ಷಣದ ಕಡೆಗೆ ಒಟ್ಟಿಗೆ ತೀವ್ರ ಗಮನ ಹರಿಸಿದರು.

ತಳ ಸಮಾಜದಲ್ಲಿ ಹುಟ್ಟಿ ಭಾರತದ ಸ್ವಾತಂತ್ರ ಸಂಗ್ರಾಮದಲ್ಲಿ ಸಕ್ರೀಯವಾಗಿ ಭಾಗವಹಿಸಿ ದೇಶ ಕಟ್ಟುವ ಕ್ರೀಯೆಯಲ್ಲಿ ತಮ್ಮನ್ನು ಪೂರ್ಣವಾಗಿ ತೊಡಗಿಸಿಕೊಂಡ ಬಾಬುಜೀರವರ ವ್ಯಕ್ತಿತ್ವ ಇತರ ರಾಷ್ಟ್ರ ನಾಯಕರಿಗಿಂತಲೂ ಬಿನ್ನವಾಗಿ ಕಾಣುತ್ತಾರೆ. ದೇಶದ ಸಮಗ್ರತೆಗೆ ತಮ್ಮತನವನ್ನು ಧಾರೆಯೆರೆದು ಮಾದರಿಯಾಗಿದ್ದಾರೆ.

ಬಾಬುಜೀಯವರು ಭಾರತಿಯ ಸಮಾಜವನ್ನು ಅದರ ಒಡಳೊಳಗಿದ್ದುಕೊಂಡು ಅರ್ಥಮಾಡಿಕೊಂಡಿದ್ದರು. ಈ ದೇಶದ ಬಡತನ, ಅಸಮಾನತೆ, ಅನಕ್ಷರತೆಗಳಿಂದ ತೊಂದರೆಗೀಡಾಗಿರುವ ಜನರ ದುಖ ದುಮ್ಮಾನಗಳನ್ನು ಬಲ್ಲವರಾಗಿದ್ದರು. ಅಂತೆಯೇ ಪುರಾಣಗಳ ಆಧ್ಯಾತ್ಮೀಕತೆಯೆ ಅಂತಸತ್ವವನ್ನು ತಿಳಿದಿದ್ದರು. ಈ ದೇಶದ ಶ್ರೀಮಂತಿಕೆಯು ಕೆಲವೇ ಜನರ ಬಳಿ ಕ್ರೋಡಿಕರಣಗೊಳ್ಳದೆ, ಅದು ಸಾರ್ವತ್ರೀಕರಣಗೊಳ್ಳಬೇಕೆಂದು ಚಿಂತಿಸಿದ ಅಪರೂಪದ ರಾಜಕಾರಣಿಯಾಗಿದ್ದರು.

ಆರ್ಥಿಕ ಸಮಾನತೆ, ಸಮಾಜಿಕ ನ್ಯಾಯ, ಶೋಷಣೆರಹಿತ ಸಮಾಜದ ಜೊತೆಗೆ ರಾಷ್ಟ್ರದ ಪ್ರತಿಯೊಬ್ಬ ಪ್ರಜೆಯೂ ಸಮಾನ ಅವಕಾಶಗಳು ದೊರೆಯುವಂತಹ ವರ್ಗರಹಿತ ಸಮಾಜ ನಿರ್ಮಾಣವನ್ನು ಬಯಸಿದ ಬಾಬುಜಿ ಅವರು ರಾಜ್ಯಂಗವು ದಲಿತರಿಗೆ ದೊರಕಿಸಿಕೊಟ್ಟ ರಾಜಕೀಯ ಮಿಸಲಾತಿಯನ್ನು ಸರಕಾರಿ ನೌಕರರಿಗೂ ವಿಸ್ತರಿಸಿದರು.

ಸ್ವತಂತ್ರ ಭಾರತ ಸರಕಾರದಲ್ಲಿ ನಾಲ್ಕು ದಶಕಗಳ ಕಾಲ ಅಧಿಕಾರದಲ್ಲಿದ್ದು ಕಾರ್ಮಿಕ ಸಚಿವರಾಗಿ, ಸಾರಿಗೆ ಮತ್ತು ರೈಲ್ವೆ ಮಂತ್ರಿಯಾಗಿ, ಸಂಪರ್ಕ ಸಚಿವರಾಗಿ ಹಾಗೂ ರಕ್ಷಣಾ ಸಚಿವರಾಗಿ ಹಲವಾರು ಖಾತೆಗಳನ್ನು ಸಮರ್ಥವಾಗಿ, ದಕ್ಷತೆಯಿಂದ ನಿರ್ವಹಿಸಿದ ಬಾಬಜೀಯವರ ಸೇವೆ ಅದ್ವೀತೀಯವಾದದು.

ಭಾರತದ ಕೃಷಿಯನ್ನು ಕೂಲಂಕುಷವಾಗಿ ಅರ್ಥಮಾಡಿಕೊಂಡಿದ್ದ ಬಾಬುಜೀರವರು ಕೃಷಿ ಪಚಿಡಿತರೇ ಆಗಿದ್ದರು. ಕೃಷಿ ಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ಅಭಿವೃದ್ಧಿ ಕಾರ್ಯಗಳು ಜಾರಿಗೆ ತಂದರು. ಆಧುನಿಕ ಬೇಸಾಯ ಕ್ರಮಗಳ ಅಳವಡಿಕೆ, ಸುಧಾರಿತ ರಸಗೊಬ್ಬರಗಳ ಬಳಕೆ, ಕಿರು ನೀರಾವರಿ ಯೋಜನೆಗಳ ಜಾರಿ, ಪಶುಸಂಗೊಪನೆ ಮತ್ತು ಮೀನುಗಾರಿಕೆ ಅಭಿವೃದ್ಧಿ, ಸಹಕಾರ ಸಂಘಗಳ ಸ್ಥಾಪನೆ, ಭೂ ಸುಧಾರಣೆ ಕಾರ್ಯಕ್ರಮಗಳು, ಸಹಕಾರ ಚಳವಳಿಗೆ ಉತ್ತೇಜನ, ಸಮೂದಾಯ ಅಭಿವೃದ್ಧಿ ಕಾರ್ಯಕ್ರಮಗಳು ಮುಂತಾದ ಯೋಜನೆಗಳು ರೈತರಿಗೆ ಮತ್ತು ಸಣ್ಣ ಕೃಷಿಕರಿಗೆ ಮುಟ್ಟಿಸಲು ಅವಿರತ ಶ್ರಮಿಸಿದರು.

ಇದರಿಂದ ದೇಶ ಆಹಾರ ಉತ್ಪಾದನೆಯಲ್ಲಿ ಸಂತೃಪ್ತಿಯನ್ನು ಕಾಣುವಲ್ಲಿ ಯಶಸ್ವಿಯಾಯಿತು. ಇದರಲ್ಲಿ ಬಾಬುಜಿಯವರ ಕೊಡುಗೆ ಅಪಾರವಾಗಿತ್ತು. ಆದ್ದರಿಂದ ಅವರನ್ನು ‘ಹಸಿರು ಕ್ರಾಂತಿಯ ಹರಿಕಾರ’ ಎಂದು ಕರೆಯುತ್ತಾರೆ.

ಬಾಬುಜೀಯವರು ಆಸಕ್ತಿ ಕೇವಲ ರಾಜಕೀಯ ಮತ್ತು ಆಢಳಿತ ವ್ಯವಸ್ಥೆಗೆ ಸೀಮಿತವಾಗಿರಲಿಲ್ಲ. ಅವರು ಭಾರತೀಯ ಸಾಂಸ್ಕøತಿಕ ಸಮೂದಾಯಗಳಿಗಾಗಿ ಹುಡುಕಾಟ ನಡೆಸಿದರು. ಪ್ರಜಾಪ್ರಭುತ್ವದಲ್ಲಿ ಅಪಾರವಾದ ನಂಬಿಕೆಯನ್ನು ಇಟ್ಟುಕೊಂಡಿದ್ದರು. ಜಾತಿ ಪದ್ದತಿಯ ಅಪಾಯಗಳನ್ನು ಅರಿತುಕೊಂಡಿದ್ದ ಅವರು ಅದರ ಮೂಲ ಮತ್ತು ಪರಿಹಾರ ಉಪಾಯಗಳನ್ನು ಶೋಧಿಸಿ ಜಾತಿ ಪದ್ದತಿ ನಿರ್ಮೂಲನೆಗೆ ಪ್ರಯತ್ನಿಸಿದರು.

ಭಾರತದ ರಾಜಕೀಯ ವ್ಯವಸ್ಥೆ ಜನತಂತ್ರ, ಸಮಾಜವಾದ ಮತ್ತು ಸರ್ವಧರ್ಮ ಸಮಾನ ಮನೋಭಾವದ ಸಂಗಮವಾಗಬೇಕೆಂಬ ಅಭಿಲಾಷೆ ಬಾಬುಜೀರವದಾಗಿತ್ತು ವಿಭಿನ್ನ ಮತಧರ್ಮಗಳ ನಡುವೆ ಪರಸ್ಪರ ನಂಬಿಕೆ, ವಿಶ್ವಾಸ ಮೂಡಿಸುವುದು ಜನತಂತ್ರದ ಕರ್ತವ್ಯವಾಗಬೇಕು. ಶಿಕ್ಷಣವು ಲಿಂಗ, ಜಾತಿ, ಧರ್ಮ, ಭಾಷೆ, ಪಂಗಡ ಬೇದಗಳಿಗೆ ಅವಕಾಶವಿರದೆ ಮುಕ್ತವಾಗಿರಬೇಕೆಂದು ಸಾರಿದರು.

ಜನತಂತ್ರಕ್ಕೆ ಕಂಕಣಬದ್ದರಾಗಿದ್ದ ಬಾಬುಜೀರವರು ಜನಪರ ಕಾರ್ಯಕ್ರಮಗಳ ರೂವಾರಿ, ರಾಜಕೀಯ ಮುತ್ಸದ್ದಿ, ಪ್ರಗತಿಪರ ಚಿಂತಕ, ದಕ್ಷ ಆಢಳಿತಗಾರ, ಹಸಿರು ಕ್ರಾಂತಿಯ ಹರಿಕಾರರಾಗಿ ಪ್ರಖ್ಯಾತಿಯನ್ನು ಪಡೆದ ಬಾಬುಜೀಯವರ ಜೀವನ ಮತ್ತು ಸಾಧನೆ ಭಾರತದ ಚರಿತ್ರೆಯಲ್ಲಿ ಬಹುಮುಖ್ಯ ಅಧ್ಯಾಯ ಎಂದು ಹೇಳಬಹುದು.

ರಾಘವೇಂದ್ರ ಹಾರಣಗೇರಾ.
ಸಮಾಜಶಾಸ್ತ್ರ ಉಪನ್ಯಾಸಕರು.
ಬಾಪೂಗೌಡ ದರ್ಶನಾಪೂರ ಸ್ಮಾರಕ ಮಹಿಳಾ ಪದವಿ ಕಾಲೇಜು.ಶಹಾಪೂರ ಜಿ|| ಯಾದಗಿರಿ
ಮೊ. 9901559873.

Related Articles

Leave a Reply

Your email address will not be published. Required fields are marked *

Back to top button