ಡಾ.ಅರಕೇರಿಗೆ ಇಂಗ್ಲೆಂಡಿನ ರಾಯಲ್ ಕಾಲೇಜ್ ಆಫ್ ಸರ್ಜನ್ ಫೆಲೋಶಿಪ್’ – ಹರ್ಷ
ಡಾ.ಗುರುರಾಜ ಸಗರನಾಡಿನ ಹೆಮ್ಮೆ - ರಾಜು ಪತ್ತಾರ

ಡಾ.ಅರಕೇರಿಗೆ ಇಂಗ್ಲೆಂಡಿನ ರಾಯಲ್ ಕಾಲೇಜ್ ಆಫ್ ಸರ್ಜನ್ ಫೆಲೋಶಿಪ್’ – ಹರ್ಷ
ಡಾ.ಗುರುರಾಜ ಸಗರನಾಡಿನ ಹೆಮ್ಮೆ – ರಾಜು ಪತ್ತಾರ
Yadgiri, ಶಹಾಪುರಃ ನಗರದ ನಿವಾಸಿ ವಿಶ್ವಕರ್ಮ ಸಮಾಜದ ಹಿರಿಯ, ನಿವೃತ್ತ ಶಿಕ್ಷಕ ಪಾಲಾಕ್ಷಿ ಅರಕೇರಿ ಅವರ ಸುಪುತ್ರ ಡಾ.ಗುರುರಾಜ ಅರಕೇರಿ ಅವರು, ಇಂಗ್ಲೆಂಡಿನ ರಾಯಲ್ ಕಾಲೇಜ್ ಆಫ್ ಸರ್ಜನ್ ಫೆಲೋಶಿಪ್’ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿರುವದು ಇಡಿ ಸಗರನಾಡಿನ ಕೀರ್ತಿ ಹೆಚ್ಚಿಸಿದ್ದಾರೆಂದು ವಿಶ್ವಕರ್ಮ ಸಮಾಜದ ಮಾಜಿ ಅಧ್ಯಕ್ಷ ರಾಜೂ ಪತ್ತಾರ ಬೊಮ್ಮನಳ್ಳಿ ಹರ್ಷ ವ್ಯಕ್ತಪಡಿಸಿದ್ದಾರೆ.
ಡಾ.ಗುರುರಾಜ ಅವರು ಡೆಂಟಲ್ ಸರ್ಜನ್ ಆಫ್ ಫೆಲೋಶಿಪ್ ಗೆ ಅರ್ಹತೆಯ ವ್ಯಕ್ತಿಯಾಗಿದ್ದು, ಅವರ ಕಾರ್ಯಕ್ಷಮತೆ, ಪರಿಶ್ರಮಕ್ಕೆ ಇದು ಹುಮ್ಮಸ್ಸು ತಂದಿದೆ. ಇನ್ನೂ ಹೆಚ್ಚಿನ ಹೊಸ ಹೊಸ ಆವಿಷ್ಕಾರಕೈಗೊಂಡು ಸಮಾಜದ ಒಳಿತಿಗಾಗಿ ಅವರ ಸೇವೆ ಮುಂದುವರೆಯಲಿ ಹೀಗೆ ಯಶಸ್ಸಿನ ಪಯಣಸಾಗಲಿ ಎಂದು ಅವರು ಹರಸಿದ್ದಾರೆ. ಭಗವಂತ ಅವರಿಗೆ ಇನ್ನೂ ಹೆಚ್ಚಿನ ಶಕ್ತಿ ಕಲ್ಪಿಸಲಿ ಎಂದು ಅವರ ಗೆಳೆಯರ ಬಳಗದ ಗುರು ಕಾಮಾ, ಡಾ.ಆನಂದಕುಮಾರ ಕರಕಳ್ಳಿ, ಪತ್ರಕರ್ತರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುದ್ನೂರ, ಬಿಎಸ್ ಎಫ್ ಯೋಧ ದುರ್ಗಪ್ಪ ಸಗರ, ಅಮೃತ ಹೂಗಾರ, ಉಮೇಶ ಬಾಗೇವಾಡಿ, ಮಾಜಿ ಗ್ರಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಬಾಗಲಿ ಇತರರು ಡಾ.ಗುರುರಾಜ ಅರಕೇರಿ ಅವರಿಗೆ ಅಭಿನಂದನೆ ವ್ಯಕ್ತಪಡಿಸಿದ್ದಾರೆ.




