ಪ್ರಮುಖ ಸುದ್ದಿ

BJP RALLYಯಲ್ಲಿ ಕಮಲ ಹಿಡಿದ ಡಿವೈಎಸ್ಪಿ!

ಬಿಜೆಪಿ ಅಬ್ಯರ್ಥಿ ಆಗ್ತಾರಂತೆ ಡಿವೈಎಸ್ಪಿ ಸಾಹೇಬ್ರು!

ಬಳ್ಳಾರಿ: ಬೆಂಗಳೂರಿನಲ್ಲಿ ಗುಪ್ತಚರ ವಿಭಾಗದಲ್ಲಿ ಡಿವೈಎಸ್ಪಿ ಆಗಿರುವ ಸವಿಶಂಕರ್ ನಾಯ್ಕ ಗೆ ರಾಜಕೀಯದ ಅಮಲು ತಲೆಗೇರಿದೆ. ಹೀಗಾಗಿ, ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಮತಕ್ಷೇತ್ರದಿಂದ ಬಿಜೆಪಿ ಅಬ್ಯರ್ಥಿಯಾಗಿ ಕಣಕ್ಕಿಳಿಯಲು ತಯಾರಿ ನಡೆಸುತ್ತಿದ್ದಾರೆ. ಅಲ್ಲದೆ ಇ‌ನ್ನೂ ಒಂದೂವರೆ ವರ್ಷ ಕಾಲ ಸೇವೆ ಬಾಕಿ ಇರುವಾಗಲೇ ಕಳೆದ ಎರಡು ತಿಂಗಳ ಹಿಂದೆಯೇ ಡಿವೈಎಸ್ಪಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ, ರಾಜೀನಾಮೆ ಇನ್ನೂ ಅಂಗೀಕಾರ ಆಗಿಲ್ಲ‌. ಆದರೂ, ಆಗಲೇ ಡಿವೈಎಸ್ಪಿ ಸಾಹೇಬ್ರು ಬಿಜೆಪಿ ಅಬ್ಯರ್ಥಿ ಅಂತ ಹೇಳಿಕೊಂಡು ಹಗರಿಬೊಮ್ಮನಹಳ್ಳಿಯಲ್ಲಿ ಪ್ರಚಾರ ಆರಂಭಿಸಿದ್ದಾರೆ ಎನ್ನಲಾಗಿದೆ.

ಈ ಹಿಂದೆ ಕೂಡ್ಲಗಿ ವಿಭಾಗದ ಡಿವೈಎಸ್ಪಿ ಆಗಿ ಕಾರ್ಯನಿರ್ವಹಿಸಿದ್ದ ಸವಿಶಂಕರನಾಯ್ಕ್ ರಾಜಕೀಯದ ಗೀಳು ಅಂಟಿಸಿಕೊಂಡಿದ್ದಾರೆ. ಶತಾಯಗತಾಯ 2018ರ ಚುನಾವಣೆಯಲ್ಲಿ ಕಣಕ್ಕಿಳಿದು ವಿಧಾನಸಭೆ ಪ್ರವೇಶಿಸುವ ಕನಸು ಕಾಣತೊಡಗಿದ್ದಾರೆ. ಪರಿಣಾಮ ಡಿವೈಎಸ್ಪಿ ಹುದ್ದೆಗೆ ಸಲ್ಲಿಸಿದ್ದ ರಾಜೀನಾಮೆ ಅಂಗೀಕಾರ ಆಗುವ ಮುನ್ನವೇ ಬಿಜೆಪಿ ಪರಿವರ್ತನಾ ಯಾತ್ರೆ ಹೆಸರಿನಲ್ಲಿ ಪ್ರಚಾರ ಆರಂಭಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button