ದಸರಾ ಆನೆಗಳ ದಂಡು ಕಂಡು ಕಾಡು ಸೇರಿದ ಕಾಡಾನೆಗಳು!
ದಾವಣಗೆರೆ: ಕಳೆದ 1ತಿಂಗಳಿನಿಂದ ಚಿತ್ರದುರ್ಗ, ದಾವಣಗೆರೆ, ತುಮಕೂರು ಮತ್ತು ಆಂಧ್ರ ಗಡಿ ಭಾಗದಲ್ಲಿ ಪುಂಡಾಟ ನಡೆಸಿದ್ದ ಕಾಡಾನೆಗಳು ಕಡೆಗೂ ಕಾಡು ಸೇರಿವೆ. ಆಂಧ್ರದ ಗಡಿಯಲ್ಲಿ ಇಬ್ಬರು, ದಾವಣಗೆರೆಯಲ್ಲಿ ಇಬ್ಬರು ಮತ್ತು ಚಿತ್ರದುರ್ಗದಲ್ಲಿ ಒಬ್ಬರನ್ನು ಬಲಿಪಡೆದಿದ್ದ ಕಾಡಾನೆಗಳು 20ಕ್ಕೂ ಹೆಚ್ಚು ಜನರನ್ನು ಗಾಯಗೊಳಿಸಿದ್ದವು. ಹೀಗಾಗಿ, ಮೈಸೂರಿನಿಂದ ಅಭಿಮನ್ಯು ನೇತೃತ್ವದ ಐದು ಆನೆಗಳು ಹಾಗೂ ಶಿವಮೊಗ್ಗದ ಸಕ್ರೆಬೈಲ್ ನಿಂದ ಎರಡು ಹೆಣ್ಣಾನೆಗಳನ್ನು ಕರೆಸಿ ಕಾಡಾನೆ ಕಾರ್ಯಾಚರಣೆ ನಡೆಸಲು 70ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ಸಜ್ಜಾಗಿದೆ. ಕಳೆದ ಮೂರು ದಿನಗಳಿಂದ ಕಾಡಾನೆ ಕಾರ್ಯಾಚರಣೆಗೆ ಸಾಕಾನೆಗಳ ಸಮೇತ ತಗ್ನರ ತಂಡ ಸಿದ್ಧವಾಗಿದೆ. ಆದರೆ, ದಸರಾ ಆನೆಗಳ ದಂಡು ಕಂಡಿರುವ ಕಾಡಾನೆಗಳು ಮಾತ್ರ ನಾಪತ್ತೆಯಾಗಿವೆ.
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಮಾನಮಟ್ಟಿ ಅರಣ್ಯದಲ್ಲಿ ಇಂದು ಒಂದು ಕಾಡಾನೆ ಇರುವ ಸುಳಿವು ಸಿಕ್ಕಿದೆ. ಅರಣ್ಯ ಇಲಾಖೆಯ ತಂಡ ಕಾಡಿನಲ್ಲಿ ತೆರಳಿ ಸರ್ಚ್ ಮಾಡಿದಾಗ ಕಾಡಾನೆ ಇರುವುದು ಪತ್ತೆಯಾಗಿದೆ. ಹೀಗಾಗಿ, ಕಾಡಾನೆಗೆ ಅರವಳಿಕೆ ಮದ್ದು ನೀಡಿ ಕಾರ್ಯಾಚರಣೆ ನಡೆಸಲು ತಂಡ ಸಿದ್ಧತೆ ನಡೆಸಿದೆ. ಆದರೆ, ಕಾಡಾನೆ ಕಾರ್ಯಾಚರಣೆ ಯಶಸ್ವಿ ಆಗುತ್ತದೋ ಅಥವಾ ಸಾಕಾನೆಗನ್ನು ಕಂಡು ಕಾಡಾನೆಗಳು ತಾವಾಗೇ ಕಾಡಿನತ್ತ ದಾಪುಗಾಲು ಹಾಕುತ್ತವೆಯೋ ಎಂಬುದನ್ನು ನಾಳೆವರೆಗೆ ಕಾದು ನೋಡಬೇಕಿದೆ.