ಪ್ರಮುಖ ಸುದ್ದಿ
ರೈತರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದ ಸರ್ಕಾರ.!
ಬೆಂಗಳೂರಃ ರೈತರಿಗೆ ರಾಜ್ಯ ಸರ್ಕಾರ ಭರ್ಜರಿ ಸಿಹಿ ಸುದ್ದಿ ನೀಡಿದೆ. ಕೃಷಿ ಸಾಲದ ನಿರೀಕ್ಷೆಯಲ್ಲಿದ್ದ ರೈತರಿಗೆ ಸಹಕಾರಿ ಸಂಸ್ಥೆಗಳು ಮತ್ತು ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಗಳಿಗೆ ನಿವ್ವಳ ಶೂನ್ಯ ದರದಲ್ಲಿ ಸಾಲ ನೀಡುವಂತೆ ಸೂಚನೆ ನೀಡಿದೆ.
ಎಲ್ಲಾ ವರ್ಗದ ರೈತರಿಗೆ 3 ಲಕ್ಷ ವರೆಗೆ ಅಲ್ಪಾವಧಿ ಸಾಲ ನೀಡಲು ಸರ್ಕಾರ ಆದೇಶ ನೀಡಿದೆ.
ಅಲ್ಲದೆ ಸಾಲದ ಅರ್ಜಿಯನ್ನು ಸುಲಭವಾಗಿ ದೊರೆಯುವಂತೆ ಕ್ರಮಕೈಗೊಳ್ಳಲು ಬ್ಯಾಂಕ್ ಗಳಿಗೆ ಸರ್ಕಾರ ಸೂಚನೆ ನೀಡಿದೆ.
ಕೊರೊನಾದಿಂದ ಕಂಗೆಟ್ಟ ಹಾಗೂ ನೆರೆ ಹಾವಳಿಗೆ ಕಂಗಾಲಾದ ರೈತರಿಗೆ ಸುಲಭವಾಗಿ ಸಾಲ ಸೌಲಭ್ಯ ದೊರೆಯುವಂತೆ ಸರ್ಕಾರ ಅನುಕೂಲ ಮಾಡಿದೆ.