ನಟ ಜಗ್ಗೇಶ ಪುತ್ರನಿಗೆ ಚಾಕು ಇರಿತ
ನಟ ಜಗ್ಗೇಶ ಪುತ್ರನಿಗೆ ಚಾಕು ಇರಿತ
ಬೆಂಗಳೂರಃ ಚಿತ್ರ ನಟ ಜಗ್ಗೇಶ ಅವರ ಹಿರಿಯ ಪುತ್ರ ನಟ ಗುರುರಾಜ ಅವರು ಸೋಮವಾರ ಬೆಳಗ್ಗೆ ತಮ್ಮ ಮಗನನ್ನು ಶಾಲೆಗೆ ಬಿಡಲು ತೆರಳಿದಾಗ ಹಿಂದಿನಿಂದ ವೇಗವಾಗಿ ಬಂದ ಕಾರೊಂದು ಗುರುರಾಜ ಅವರ ಹಿಂಬದಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ, ನೋಡ್ಕೊಂಡು ನಡೆಸು ಎಂದು ಬುದ್ಧಿವಾದ ಹೇಳಿದ ಗುರುರಾಜನಿಗೆ ಬಾಯಿಗೆ ಬಂದಂಗೆ ಮಾತಾಡಿ ಸೀದಾ ಕಾರೊಳಗಿನ ಚಾಕು ತಂದು ತಿವಿದ ಘಟನೆ ಬೆಂಗಲೂರಿನಲ್ಲಿ ನಡೆದಿದೆ.
ಅದೃಷ್ಟವಶಾತ್ ಚಾಕು ಹೊಟ್ಟೆಗೆ ತಾಗದೆ ಎಡ ಕಾಲಿನ ತೊಡೆ ಭಾಗಕ್ಕೆ ತಾಗಿ ರಕ್ತ ಸುರಿಯುತ್ತಿದ್ದಂತೆ ಆತ ನಾನ್ಯಾರು ಗೊತ್ತೇನೋ ಏನ್ನುತ್ತಾ ಧಮಕಿ ಹಾಕಿದ್ದಾನೆ. ಇಷ್ಟೆಲ್ಲ ನಡೆಯುತ್ತಿದ್ದರು ಜನರು ಮಾತ್ರ ಮೂಕ ಪ್ರೇಕ್ಷಕರಂತೆ ನೋಡುತ್ತಿದ್ದರಂತೆ.
ನಟ ಗುರುರಾಜ ನ ಕಾರಿನಲ್ಲಿ ಮಗು ಇದೆ ಆದಾಗ್ಯು ಚಾಕು ತೆಗೆದು ಚುಚ್ಚುಲು ಬರುತ್ತಾನೆ ಎಂತಹ ಕಟುಕರಿವರು, ತಾವೇ ಹಿಂಬದಿಯಿಂದ ಕಾರಿಗೆ ಡಿಕ್ಕಿ ಹೊಡೆದ ಕೇವಲ ಪ್ರಶ್ನಿಸಿದ್ದಕ್ಕೆ ಮಾತ್ರ ಕೊಲೆಗೆ ಯತ್ನ ನಡೆಸುತ್ತಾರೆ ಅಂದರೆ, ಎಲ್ಲಿಗೆ ಬಂದು ನಿಂತಿದೆ ನಾಗರಿಕತೆ ಎನ್ನುವುದು ಯೋಚಿಸಲೇ ಬೇಕಾದುದು.
ಘಟನೆಯಿಂದ ಗಾಯಗೊಂಡ ಗುರುರಾಜರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಚಾಕು ತಿವಿದ ಖದೀಮ ಪರಾರಿಯಾಗಿದ್ದಾನೆ. ಈ ಘಟನೆ ಕುರಿತು ಆರ್.ಟಿ.ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯಿಂದ ನೊಂದಿರುವ ನಟ ಗುರುರಾಜ ಅಷ್ಟೊಂದು ಜನರಿದ್ದಾರೆ ಮಾನವೀಯತೆಗಾದರೂ ಘಟನೆ ತಡೆಯಲು ಮುಂದಾಗಲಿಲ್ಲ ಎನ್ನುವುದು ಮಾನಸಿಕವಾಗಿ ಜಾಸ್ತಿ ನೋವು ತಂದಿದೆ ಎಂದಿದ್ದಾರೆ. ಅಲ್ಲದೆ ಅ ಕ್ರೂರಿ ಯನ್ನು ಪೊಲೀಸರು ಕೂಡಲೇ ಹಿಡಿದು ಕಠಿಣ ಕ್ರಮಕೈಗೊಳ್ಳಲಿದ್ದಾರೆ ಎಂದರು.
ಮಾಧ್ಯಮದವರಿಗೆ ಹೇಳಿಕೆ ನೀಡುವಾಗ ಅವರು, ಎರಡೆರಡು ಸಲ ನಮಸ್ಕಾರ ಎಂದು ನೋವಿನಿಂದಲೇ ನುಡಿದ ಬಗ್ಗೆ ಜನರು ಅನ್ಯಾಯ.ನಡೆಯುವದನ್ನು ನೋಡ್ತಾ ಕುಳಿತರೆ, ಮಾನವೀಯತೆಗೆ ಬೆಲೆ ಎಲ್ಲಿಂದ ಬರುತ್ತದೆ. ಸಾರ್ವಜನಿಕರು ಇಂತಹ ಘಟನೆ ನಡೆದಾಗ ಒಂದಾಗಿ ಪಾಠ ಕಲಿಸಿದಾಗಲೇ ಅದಕ್ಕೊಂದು ಶಕ್ತಿ ಬರುತ್ತದೆ. ಸಮಾಜ ನಾಗರಿಕರ ಮುಂದೆ ತಪ್ಪು ಮಾಡಿದರೆ ನಡೆಯಲ್ಲ ಜನ ಪಾಠ ಕಲಿಸ್ತಾರೆ ಎನ್ನುವುದು ಇಂತ್ಹ ಕ್ರೂರಿ ಮೃಗಗಳಿಗೆ ಗೊತ್ತಾಗಬೇಕು. ಇನ್ನಾದರೂ ಸಾರ್ವಜನಿಕರು ಎಚ್ಚೆತ್ತುಕೊಳ್ಳಲಿ.
ಕಾರ್ ನಲ್ಲಿ ಮಗು ಇದೆ ಅದನ್ನು ಲೆಕ್ಕಿಸದೆ ಕೇವಲ ನೋಡ್ಕೊಂಡು ನಡಿಸಪಾ..ಎಂದಿದ್ದಕ್ಕೆ ಚಾಕು ಇರಿತಾರೆ ಅಂದರೆ..ಏನಿದು ಕಾರ್ ಗಳಲ್ಲಿ ಚಾಕು ಚೂರಿ ಇಟ್ಕೊಂಡು ತಿರುಗ್ತಾರ. ಎಲ್ಲರೂ ಸೇರಿ ಆತನ ಹಿಡಿಬಹುದಿತ್ತು. ಆದರೆ ಯಾರು ಮುಂದಾಗಲಿಲ್ಲ ಎಂಬುದು ಶೋಚನೀಯವಾದುದು. ಹೀಗೆ ಆದರೆ ಬೆಂಗಳೂರ ಮುಂಬೈ ಆಗುತ್ತೆ ಎಂದು ಅವರ ತಂದೆ ನಟ ಜಗ್ಗೇಶ ಅಸಮಧಾನ ವ್ಯಕ್ತಪಡಿಸಿದ್ದಾರೆ.
Nice my dear friend Mallikarjun
Thank u brother..