ಪ್ರಮುಖ ಸುದ್ದಿ

ಕಿಡಿಗೇಡಿಗಳ ಕೃತ್ಯ : ಅರಣ್ಯಕ್ಕೆ ಬೆಂಕಿ, ಗಿಡಮರಗಳು ಬೆಂಕಿಗಾಹುತಿ!

ಚಿತ್ರದುರ್ಗ: ಕುರುಮರಡಿಕೆರೆ ಗ್ರಾಮದ ಸಮೀಪದ ಜೋಗಿಮಟ್ಟಿ ಅರಣ್ಯಕ್ಕೆ ಬೆಂಕಿ ಬಿದ್ದಿದ್ದು ನೂರಾರು ಗಿಡಮರಗಳು ಬೆಂಕಿಗಾಹುತಿ ಆಗಿವೆ. ಅಗ್ನಿ ಶಾಮಕ ದಳ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ಕಿಡಿಗೇಡಿಗಳು ಅರಣ್ಯಕ್ಕೆ ಬೆಂಕಿಯಿಟ್ಟಿರುವ ಶಂಕೆ ವ್ಯಕ್ತವಾಗಿದೆ. ನಿನ್ನೆ ರಾತ್ರಿ ಸಮಯದಲ್ಲಿ ಬೆಂಕಿ ಹೊತ್ತಿಕೊಂಡಿದ್ದು ಭೀಕರ ಬರಗಾಲದಿಂದ ಬೇ ಸಿಗೆಯಲ್ಲಿ ಒಣಗಿದ್ದ  ಗಿಡಮರಗಳು ಸಂಪೂರ್ಣ ನಾಶ ಆಗಿವೆ. ಅಲ್ಲದೆ ಅರಣ್ಯದಲ್ಲಿನ ಪ್ರಾಣಿ ಪಕ್ಷಿ ಸಂಕುಲವು ಅಗ್ನಿಗಾಹುತಿ ಆಗಿವೆ ಎಂದು ತಿಳಿದು ಬಂದಿದೆ. ಅರಣ್ಯಾಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂಬುದು ಜನರ ಆಗ್ರಹವಾಗಿದೆ.

Related Articles

Leave a Reply

Your email address will not be published. Required fields are marked *

Back to top button