ಪ್ರಮುಖ ಸುದ್ದಿ
ಜಾತಿ ಆಧಾರದಲ್ಲಿ ಅಧಿಕಾರಿಗಳಿಗೆ ಉನ್ನತ ಸ್ಥಾನ – ಡಾ.ಜಿ.ಪರಮೇಶ್ವರ್ ಕಳವಳ
ತುಮಕೂರು : ಸರ್ಕಾರಿ ಅಧಿಕಾರಿಗಳಿಗೆ ಉನ್ನತ ಸ್ಥಾನ ನೀಡುವಲ್ಲಿಯೂ ಜಾತಿ ಪ್ರಮುಖ ಪಾತ್ರ ವಹಿಸುತ್ತಿರುವುದು ದುರದೃಷ್ಠಕರ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಕಳವಳ ವ್ಯಕ್ತಪಡಿಸಿದ್ದಾರೆ. ಅಧಿಕಾರದಲ್ಲಿರುವವರು ತಮ್ಮ ಸಮುದಾಯದ ಅಧಿಕಾರಿಗಳಿಗೆ ಮಾತ್ರ ಉನ್ನತ ಸ್ಥಾನಮಾನ ನೀಡುತ್ತಿದ್ದಾರೆ. ಅಧಿಕಾರಿಗಳಿಗೆ ಪೋಸ್ಟಿಂಗ್ ನೀಡಲೂ ಸಹ ಅಧಿಕಾರದಲ್ಲಿರುವವರು ಮೊದಲು ಜಾತಿ ನೋಡುತ್ತಾರೆ. ಸರ್ಕಾರದ ಚುಕ್ಕಾಣಿ ಹಿಡಿಯುವ ರಾಜಕಾರಣಿಗಳ ಮನಸ್ಸು ಮೊದಲು ಬದಲಾಗಬೇಕು. ಸಮಾನತೆ ಸಾಧಿಸಬೇಕಾದ ಸರ್ಕಾರವೇ ಜಾತಿಬೂತಕ್ಕೆ ಅಂಟಿಕೊಳ್ಳುವುದು ಆತಂಕದ ಸಂಗತಿ ಎಂದು ಅವರು ಹೇಳಿದ್ದಾರೆ.