ಮತಕ್ಷೇತ್ರದ ರಾಜಕೀಯ ಶಕ್ತಿ ಕೇಂದ್ರ ಗಾಂಧಿ ಚೌಕ್- ದರ್ಶನಾಪುರ
ಚೌಕಿನಲ್ಲಿ ಗಾಂಧೀಜಿ ಪ್ರತಿಮೆ ಅನಾವರಣ
ರಾಜಕೀಯ ವಿಚಾರ ಕೇಂದ್ರ ಗಾಂಧಿ ವೃತ್ತ-ಮಡ್ಡಿ
ಯಾದಗಿರಿ, ಶಹಾಪುರಃ ಬಾಪುಗೌಡ ದರ್ಶನಾಪುರರ ಅವರ ಕಾಲದಿಂದಲೂ ಇಲ್ಲಿನ ಗಾಂಧೀ ಚೌಕ್ ಹೆಸರು ವಾಸಿಯಾಗಿದ್ದು, ಇದೊಂದು ರಾಜಕೀಯ ಚಟುವಟಿಕೆಗಳ ವಿಚಾರ ವಿನಿಮಯ ಕೇಂದ್ರ ವಾಗಿತ್ತು ಎಂದು ತಿಳಿದು ಬರುತ್ತದೆ. ಪ್ರಸ್ತುತ ಗಾಂಧೀ ಚೌಕಿನಲ್ಲಿ ಇಂದು ಸಂಭ್ರದೊಂದಿಗೆ ಮಹಾತ್ಮ ಗಾಂಧೀಜಿ ಅವರ ಪ್ರತಿಮೆ ಪ್ರತಿಷ್ಠಾಪಿಸಿರುವದು ಎಲ್ಲರ ಸಹಕಾರ ಸಹಭಾಗಿತ್ವದಿಂದ ಈ ಮಹಾನ್ ಕಾರ್ಯ ನೆರವೇರಿದೆ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು.
ನಗರದ ಗಾಂಧಿ ಚೌಕಿನಲ್ಲಿ ಬುಧವಾರ ಮಹಾತ್ಮ ಗಾಂಧಿಯವರ ನೂತನ ಪ್ರತಿಮೆಯನ್ನು ಅನಾವರಣಗೊಳಿಸಿ ಅವರು ಮಾತನಾಡಿದರು.
ಗಾಂಧೀ ಚೌಕ್ನ ಎಲ್ಲಾ ಮಹನೀಯರು ಜಾತ್ಯಾತೀತ, ಪಕ್ಷಾತೀತವಾಗಿ ಗಾಂಧಿಜಿಯವರ ಪ್ರತಿಮೆ ಅನಾವರಣ ಸಮಾರಂಭವನ್ನು ಅಚ್ಚುಕಟ್ಟಾಗಿ ಆಯೋಜಿಸಿರುವದು ಸಂತಸ ತಂದಿದೆ. ಗಾಂಧೀಯವರ ಪ್ರತಿಮೆ ಅನಾವರಣ ಕಾರ್ಯ ಬಹುದಿನಗಳಿಂದ ನನೆಗುದಿಗೆ ಬಿದ್ದಿತ್ತು. ಸಾಕಷ್ಟು ಬಾರಿ ಈ ಕಡೆಯಿಂದ ಹೋಗುತ್ತಿರುವಾಗ ಪ್ರತಿಮೆ ಕೂಡಿಸಿದ್ದಲ್ಲಿ ಇದಕ್ಕೊಂದು ರೂಪ ಬರಲಿದೆ ಎಂದೆನಿಸಿತ್ತು. ಅದನ್ನು ಇಲ್ಲಿನ ಆತ್ಮೀಯರ ಜೊತೆ ಮಾತನಾಡಿದಾಗ ಈ ಕೆಲಸಕೈಗೂಡಿದೆ ಎಂದು ವಿವರಿಸಿದರು.
ಹಿರಿಯ ಬಿಜೆಪಿ ಮುಖಂಡ ಮಲ್ಲಣ್ಣ ಮಡ್ಡಿ ಸಾಹು ಮಾತನಾಡಿ, ಸ್ವಾತಂತ್ರ್ಯ ದೊರೆತಾಗಿನಿಂದಲೂ ಈ ಗಾಂಧೀ ಚೌಕ್ ಹೆಸರು ಬಂದಿದೆ. ಆಗಿನ ಹಿರಿಯ ನಾಯಕರೆಲ್ಲರೂ ಗಾಂಧಿವಾದಿಗಳು ಇಲ್ಲಿ ಗಾಂಧಿ ಚೌಕ್ ಎಂದು ನಾಮಫಲಕ ಹಾಕಿ ರೂಢಿಗೆ ತಂದಿದ್ದರು.
ಆಗಿನಿಂದಲೂ ಇಲ್ಲಿನ ಗಾಂಧಿ ಚೌಕ್ನಲ್ಲಿ ರಾಜಕೀಯ ಚಟುವಟಿಕೆಗಳು, ರಾಜಕೀಯ ವಿಚಾರ, ಚರ್ಚೆಗಳು ನಡೆಯುವದು ಸಾಮಾನ್ಯ. ಚುನಾವಣೆಯಲ್ಲಿ ಯಾರಪರ ಚೌಕಿನಲ್ಲಿ ಮಾತುಗಳ ಕೇಳಿ ಬರುತ್ತಿವೆ ಅವರೇ ಗೆಲುವು ಸಾಧಿಸುವದು ಎಂಬ ಸುದ್ದಿ ಪ್ರತೀತಿ ಹೊಂದಿದೆ.
ಅದರಂತೆ ಇಲ್ಲಿನ ನಿವಾಸಿಗಳು ರಾಜಕೀಯ ಮುಖಂಡರು ಬುದ್ಧಿವಂತರು, ಬಹು ಬುದ್ಧಿವಂತರು ಎಂದು ಮಾರ್ಮಿಕವಾಗಿ ನುಡಿದರು.,ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ, ಹಿರಿಯ ಕಾಂಗ್ರೆಸ್ ಮುಖಂಡ ಚಂದ್ರಶೇಖರ ಆರಬೋಳ ಮಾತನಾಡಿದರು. ಮೊದಲಿಗೆ ಮುಖಂಡ ಸುರೇಂದ್ರ ಪಾಟೀಲ್ ಮಡ್ನಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಡಿವೆಪ್ಪ ಜಾಕಾ ಸ್ವಾಗತಿಸಿದರು. ರುದ್ರಪ್ಪ ಚಟ್ರಿಕಿ ನಿರೂಪಿಸಿದರು. ಸುಧೀರ ಚಿಂಚೋಳಿ ವಂದಿಸಿದರು.
ಇದೇ ಸಂದರ್ಭದಲ್ಲಿ ನಗರಸಭೆಯ ನೂತನ ಸದಸ್ಯರೆಲ್ಲರಿಗೂ ಸನ್ಮಾನಿಸಲಾಯಿತು. ಮತು ಪೌರಾಯುಕ್ತರ ಬಸವರಾಜ ಶಿವಪೂಜೆ ಹಾಗೂ ಇಂಜೀನಯರ್ ಬಕ್ಕಪ್ಪ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷ ನಾಗಣ್ಣ ಪೂಜಾರಿ ರಸ್ತಾಪುರ, ಶರಣು ಗದ್ದುಗೆ, ಚಂದ್ರಶೇಖರ ಲಿಂಗದಳ್ಳಿ, ಡಾ.ಚಂದ್ರಶೇಖರ ಸುಬೇದಾರ, ಬಸವರಾಜ ಹಿರೇಮಠ, ಕೆಂಚಪ್ಪ ನಗನೂರ, ಗುಂಡಪ್ಪ ತುಂಬಗಿ, ಸಿದ್ದಪ್ಪ ಸಾಹು ಕಿಣ್ಣಿ, ನೀಲಪ್ಪ ಚೌದ್ರಿ ಇತರರು ಭಾಗವಹಿಸಿದ್ದರು.