ಪ್ರಮುಖ ಸುದ್ದಿ

ಶಹಾಪುರಃ ಖಾಸಗೀಕರಣ ವಿರೋಧಿಸಿ ಜೆಸ್ಕಾಂ ನೌಕರರ ಪ್ರತಿಭಟನೆ

ಖಾಸಗೀಕರಣ ವಿರೋಧಿಸಿ ಜೆಸ್ಕಾಂ ನೌಕರರ ಪ್ರತಿಭಟನೆ

ಶಹಾಪುರಃ ವಿದ್ಯುತ್ ಪ್ರಸರಣ ನಿಗಮ ಖಾಸಗೀಕರಣಗೊಳಿಸುತ್ತಿರುವದನ್ನು ವಿರೋಧಿಸಿ ಇಲ್ಲಿನ ಜೆಸ್ಕಾಂ ನೌಕರರು ಕಪ್ಪು ಬಟ್ಟೆ ಧರಿಸಿ ಸೋಮವಾರ ಪ್ರತಿಭಟನೆ ನಡೆಸಿದರು. ರಾಜ್ಯ ಕೆಪಿಟಿಸಿಎಲ್ ನೌಕರರ ಸಂಘ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲು ಕರೆ ನೀಡಿರುವ ಹಿನ್ನೆಲೆ ನಗರದ ಶಹಾಪುರ ಉಪವಿಭಾಗದಲ್ಲೂ ನೌಕರರು ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಿದರು.

ಕೇಂದ್ರ ಸರ್ಕಾರ ವಿದ್ಯುತ್ ಸರಬರಾಜು ಕಂಪನಿಯನ್ನು ಖಾಸಗೀಕರಣ ಮಾಡಲು ಹೊರಟಿದ್ದು, ಇದರಿಂದ ಪ್ರಸ್ತುತ ನೌಕರದಾರರಿಗೆ ತೊಂದರೆಯಾಗಲಿದೆ. ಈ ಕೂಡಲೇ ಕೇಂದ್ರ ಸರ್ಕಾರ ಖಾಸಗೀಕರಣ ನೀತಿ ವಾಪಸ್ ಪಡೆಯಬೇಕು. ಇಲ್ಲವಾದಲ್ಲಿ ಮುಂದೆ ಉಗ್ರ ಪ್ರತಿಭಟನೆ ಅನಿವಾರ್ಯವಾಗಲಿದೆ ಎಂದಯ ಪ್ರತಿಭಟನಾನಿರತರು ಎಚ್ಚರಿಸಿದರು.

ಅಲ್ಲದೆ ವಿದ್ಯುತ್ ಸರಬರಾಜು ಇಲಾಖೆ ಖಾಸಗೀಕರಣಗೊಳಿಸದಲ್ಲಿ ರೈತಾಪಿ ಜನರಿಗೆ ಮತ್ತು ದಲಿತರು ಬಡವರಿಗೂ ಹೊರೆಯಾಗಲಿದೆ. ಖಾಸಗೀಕರಣದಿಂದ ವಿದ್ಯುತ್ ಬಿಲ್ ಹೆಚ್ಚಳವಾಗುವ ಸಾಧ್ಯತೆ ಇದೆ. ಅಲ್ಲದೆ ಖಾಸಗೀಕರಣಗೊಂಡಲ್ಲಿ ಅವರು ಜನಸಾಮಾನ್ಯರ ಮೇಲೆ ಎಲ್ಲವೂ ಹೊರ ಬೀಳಲಿದೆ. ಇದರಿಂದ ಬಡವರು, ದಲಿತರು ಅಸಹಾಯಕರು ತೀರ ತೊಂದರೆ ಅನುಭವಿಸಬೇಕಾಗುತ್ತದೆ. ನೌಕರರದಾರರು ಅವರಕೈಯಲ್ಲಿನ ಅಡಿಯಾಳಾಗಬೇಕಾಗುತ್ತದೆ. ಹೀಗಾಗಿ ಖಾಸಗೀಕರಣ ನೀತಿ ಜನಸಾಮಾನ್ಯರಿಗೆ ವಿರುದ್ಧವಾದದ್ದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೀಗಾಗಿ ವಿದ್ಯುತ್ ಸರಬರಾಜು ಇಲಾಖೆ ಖಾಸಗೀಕರಣ ನೀತಿ ವಿರೋಧಿಸುವಲ್ಲಿ ಜನಸಾಮಾನ್ಯರು ಭಾಗಿಯಾಗಬೇಕು ಎಂದು ಕರೆ ನೀಡಿದರು. ಸೋಮವಾರ ಬೆಳಗ್ಗೆ ಇಲ್ಲಿನ ಜೆಸ್ಕಾಂ ಶಾಖಾ ಕಚೇರಿ ಆವರಣದಲ್ಲಿ ಸೇರಿದ ಕೆಪಿಟಿಸಿಎಲ್ ನೌಕರರು ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಶಹಾಪುರ ಜೆಸ್ಕಾಂ ನೌಕರರ ಸಂಘದ ಅಧ್ಯಕ್ಷ ಬಸವರಾಜ ಮಾಲಿ ಪಾಟೀಲ್, ಕಾರ್ಯದರ್ಶಿ ಎಕ್ಬಾಲ್ ಲೋಹಾರಿ, ರಮೇಶ ತಾಮತ್ರಿಕ ಸಹಾಯಕ, ಲೆಕ್ಕಾಧಿಕಾರಿ ಮಹ್ಮದ್ ನಾಜುದ್ದೀನ್ ಮತ್ತು ಗ್ರಾಮ ವಿದ್ಯುತ್ ಪ್ರತಿನಿಧಿಗಳ ಒಕ್ಕೂಟದ ರಾಜ್ಯಧ್ಯಕ್ಷ ಶಿವರುದ್ರಗೌಡ ಸೇರಿದಂತೆ ಇತರರಿದ್ದರು.

Related Articles

Leave a Reply

Your email address will not be published. Required fields are marked *

Back to top button