ಪ್ರಮುಖ ಸುದ್ದಿ
ನೀವು ಚಿನ್ನದ ಸರ ಧರಿಸಿದ್ದೀರಾ? ಹಾಗಾದ್ರೆ ಈ ಸ್ಟೋರಿ ಓದಿ!
ಕೊಪ್ಪಳ: ನಗರದ ಕವಲೂರು ಬಡಾವಣೆಯಲ್ಲಿ ಖದೀಮರಿಬ್ಬರು ಪೆನ್ ಕೇಳುವ ನೆಪದಲ್ಲಿ ಸಮೀಪಕ್ಕೆ ಬಂದು ಭಾರತಿ ಎಂಬ ವಿದ್ಯಾರ್ಥಿನಿಯ ಕತ್ತಿಗೆ ಬ್ಲೇಡ್ ಹಾಕಿದ ಘಟನೆ ನಡೆದಿದೆ. ಪರಿಣಾಮ ಗಾಯಗೊಂಡು ಗಾಬರಿಯಾದ ವಿದ್ಯಾರ್ಥಿನಿ ಕೂಗಾಡಿದಾಗ ಖದೀಮರು ಎಸ್ಕೇಪ್ ಆಗಿದ್ದಾರೆ.
ಗಾಬರಿಯಾದ ವಿದ್ಯಾರ್ಥಿನಿಗೆ ಮೊದಲಿಗೆ ಅಪರಿಚಿತರು ಬಂದು ಏಕಾಏಕಿ ಬ್ಲೇಡ್ ಹಾಕಿದ್ದು ಏಕೆ ಎಂದೇ ಗೊತ್ತಾಗಿಲ್ಲ. ಬಳಿಕ ಕೊರಳಲ್ಲಿ ಚಿನ್ನದ ಸರ ಇರುವ ಕಾರಣಕ್ಕೆ ಖಧೀಮರು ಬೆನ್ನಟ್ಟಿ ಬಂದು ಕೃತ್ಯವೆಸಗಿದ್ದಾಗಿ ಗೊತ್ತಾಗಿದೆ. ತಕ್ಷಣಕ್ಕೆ ಹಾಸ್ಟೆಲ್ ಗೆ ತೆರಳಿದ ವಿದ್ಯಾರ್ಥಿನಿ ವಾರ್ಡನ್ ಗೆ ನಡೆದ ಘಟನೆ ವಿವರಿಸಿದ್ದಾಳೆ. ಹೀಗಾಗಿ, ಕವಲೂರು ನಗರದ ಬಿಸಿಎಂ ಹಾಸ್ಟೆಲ್ ವಾರ್ಡನ್ ಕೊಪ್ಪಳ ನಗರ ಠಾಣೆಗೆ ಈ ಬಗ್ಗೆ ದೂರು ನೀಡಿದ್ದಾರೆ.